ಮಡಿಕೇರಿ ವ್ಯಾಪಾರಿಯಿಂದ ದಂಡ ವಸೂಲಿ
ಮಡಿಕೇರಿ. ಮಾ. 6 : ತೂಕದಲ್ಲಿ ಮೋಸ ಮಾಡಿ ನಗರದಲ್ಲಿ ವ್ಯಾಪಾರ ಮಾಡುತ್ತಿದ್ದ ಕಲ್ಲಂಗಡಿ ಹಣ್ಣು ವ್ಯಾಪಾರಿಯ ವಿರುದ್ದ ಮಡಿಕೇರಿಯ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರು, ಕರ್ನಾಟಕ ಪ್ರಮಾಣ ಬದ್ದ ತೂಕ ಮತ್ತು ಅಳತೆ (ಅಮಲುಜಾರಿ) ನಿಯಮದಡಿಯಲ್ಲಿ ಮೊಕದ್ದಮೆಯನ್ನು ದಾಖಲಿಸಿ ಸದರಿ ಕಲ್ಲಂಗಡಿ ವ್ಯಾಪಾರಿಯಿಂದ ರೂ. 3 ಸಾವಿರ ದಂಡ ವಸೂಲು ಮಾಡಿದ್ದಾರೆ.
ಈ ರೀತಿ ವ್ಯಾಪಾರಸ್ಥರು ತೂಕ, ಅಳತೆ, ಪೊಟ್ಟಣ ಸಾಮಗ್ರಿಗಳ ದರ ಹಾಗೂ ಪರಿಮಾಣಗಳಲ್ಲಿ ನಿಯಮ ಉಲ್ಲಂಘಿಸುತ್ತಿರುವ ಅಥವಾ ಈ ರೀತಿ ಗ್ರಾಹಕರಿಗೆ ಮೋಸವಾಗುತ್ತಿರುವ ಬಗ್ಗೆ ತಿಳಿದುಬಂದಲ್ಲಿ ಸಾರ್ವಜನಿಕರು, ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರು, ಮೊದಲನೇ ಮಹಡಿ, ನೀಲಕಂಠೇಶ್ವರ ಸ್ಟೋರ್ಸ್, ಮಾರ್ಕೆಟ್ ಹತ್ತಿರ ಮಡಿಕೇರಿ ಇವರಿಗೆ ಪೂರ್ಣ ಮಾಹಿತಿಯೊಂದಿಗೆ ದೂರನ್ನು ಸಲ್ಲಿಸಬಹುದಾಗಿದೆ ಎಂದು ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications