ನನಗೆ ಸಾಯಲು ಇಷ್ಟವಿಲ್ಲ, ಪಾಕ್ ಪೇದೆ ಅಬ್ಬಾಸ್

ಮಂಗಳವಾರ ಬೆಳಗ್ಗೆ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ 5 ಮಂದಿ ಪೊಲೀಸ್ ಇಲಾಖೆ ಸಿಬ್ಬಂದಿಗಳ ಅಂತ್ಯ ಸಂಸ್ಕಾರದ ನಂತರ ಅಬ್ಬಾಸ್ ಮಾದ್ಯಮ ಪ್ರತಿನಿಧಿಗಳೊಂದಿಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನನ್ನ ಕೆಲಸಕ್ಕೆ ರಾಜೀನಾಮೆ ನೀಡುವೆ. ನನ್ನ ಸಹದ್ಯೋಗಿಗಳು ಭಯೋತ್ಪಾದಕರ ಗುಂಡಿಗೆ ಬಲಿಯಾಗಿದನ್ನು ಕಣ್ಣಾರೆ ಕಂಡಿರುವೆ. ಜೀವನ ಸಾಗಿಸಲು ಬೇರೆ ಮಾರ್ಗ ಕಂಡುಕೊಂಡು ನೆಮ್ಮದಿಯಿಂದ ಇರಲು ಬಯಸಿರುವೆ ಎಂದು ಹೇಳಿದ್ದಾನೆ.
ಮಂಗಳವಾರ ಬೆಳಗ್ಗೆ ನಗರದ ಗಢಾಫಿ ಕ್ರೀಡಾಂಗಣ ಹತ್ತಿರದ ಲಿಬರ್ಟಿ ಮಾರುಕಟ್ಟೆ ಬಳಿ ಶ್ರೀಲಂಕಾ ಕ್ರಿಕೆಟ್ ಆಟಗಾರರು ಹೊತ್ತುಕೊಂಡು ತೆರಳುತ್ತಿದ್ದ ಬಸ್ಸಿನ ಮೇಲೆ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದ್ದರು. ಈ ಸಂದರ್ಭದಲ್ಲಿ ಆಟಗಾರರ ರಕ್ಷಣೆಗಿದ್ದ ಐದು ಮಂದಿ ಭದ್ರತಾ ಸಿಬ್ಬಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
(ದಟ್ಸ್ ಕನ್ನಡ ವಾರ್ತೆ)
ಗುಂಡಿನ ದಾಳಿ ಭಾರತದ ಕೈವಾಡ ಶಂಕೆ: ಪಾಕ್












Click it and Unblock the Notifications