ಲಾಹೋರ್ ಉಗ್ರರ ದಾಳಿ, ಮುಂಬೈ ದಾಳಿಯ ನಕಲು

ಸುಮಾರು 12 ಜನರನ್ನು ಹೊಂದಿದ ಉಗ್ರರ ತಂಡ ವ್ಯವಸ್ಥಿತವಾಗಿ ಸಂಚು ರೂಪಿಸಿ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇಂದು ಪಾಕಿಸ್ತಾನದ ವಿರುದ್ಧ ಶ್ರೀಲಂಕಾ ತಂಡ ಎರಡನೇ ಟೆಸ್ಟ್ ಪಂದ್ಯ ಗಢಾಫಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದ ಲಂಕಾ ಆಟಗಾರರ ಮೇಲೆ ನಡೆದ ದಾಳಿ ಅತ್ಯಂತ ಕ್ರೂರ ಹಾಗೂ ಖಂಡನೀಯ ಎಂದು ತಸೀರ್ ಹೇಳಿದ್ದಾರೆ.
ಗುಂಡಿನ ದಾಳಿ ನಡೆಸಿದವರು ತರಬೇತಿ ಹೊಂದಿದ ವ್ಯಕ್ತಿಗಳು. ಅವರು ಪ್ರಮುಖ ಭಯೋತ್ಪಾದನಾ ಸಂಘಟನೆಗಳ ಸೇರಿದ ಉಗ್ರರು ಎನ್ನಲಾಗಿದೆ. ಅವರ ಬಳಿ ಸಿಕ್ಕಿರುವ ರಾಕೆಟ್ ಗಳು, ಹ್ಯಾಂಡ್ ಗ್ರೆನೇಡ್ ಗಳು, ಬಂದೂಕುಗಳು ಇದಕ್ಕೆ ಸಾಕ್ಷಿ. ಭಾರತದ ಮುಂಬೈನಲ್ಲಿ ಕಳೆದ ವರ್ಷ ನವೆಂಬರ್ ನಡೆದ ಕೃತ್ಯಕ್ಕೂ ಇವತ್ತಿನ ಕೃತ್ಯಕ್ಕೂ ಸಾಮ್ಯತೆ ಇದೆ ಎಂದು ತಸೀರ್ ಶಂಕೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ಮುಂಬೈ ನಲ್ಲಿ ನಡೆದ ಭಯೋತ್ಪಾದನಾ ಕೃತ್ಯದಲ್ಲಿ 180ಕ್ಕೂ ಅಧಿಕ ಮಂದಿ ಮೃತಪಟ್ಟು, 300 ಹೆಚ್ಚು ಜನ ಗಾಯಗೊಂಡಿದ್ದರು. ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆ ಈ ಘಟನೆ ರೂವಾರಿ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು.
(ಏಜನ್ಸೀಸ್)
ಪೂರಕ ಓದಿಗೆ:
ಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ
ಲಾಹೋರ್ ಗುಂಡಿನ ದಾಳಿ, ಭಯೋತ್ಪಾದಕರ ಕೃತ್ಯ












Click it and Unblock the Notifications