ಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ
ಕುಂದಾಪುರ,
ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. id="toptextpromo">ಶನಿವಾರ
ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. ಭಾನುವಾರ ಬೆಳಗ್ಗೆ ಪ್ರಾರ್ಥನೆಗೆ ಬಂದ ಕ್ರೈಸ್ತರು ವಿಗ್ರಹ ಧ್ವಂಸಗೊಂಡಿರುವುದನ್ನು ಕಂಡು ನಂತರ ಇಗರ್ಜಿ ವಠಾರದಲ್ಲಿ ಪ್ರತಿಭಟನೆ ನಡೆಸಿ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದರು. ಸ್ಥಳಕ್ಕೆ ಎಸ್ಪಿ ಪ್ರವೀಣ್ ಮಧುಕರ್ ಪವಾರ್ ಭೇಟಿ ನೀಡಿ ಪರಿಶೀಲಿಸಿದರು. ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚುವುದಾಗಿ ಅವರು ಭರವಸೆ ನೀಡಿದರು. ಶಾಸಕ ಲಕ್ಷ್ಮಿನಾರಾಯಣ, ಉಡುಪಿ ಜಿಲ್ಲಾಧಿಕಾರಿ ಹೇಮಲತಾ, ಧರ್ಮಗುರು ಅಲ್ಬನ್ ಡಿಸೋಜಾ ಸ್ಥಳಕ್ಕೆ ಭೇಟಿ ನೀಡಿದ್ದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications