ಮೈಸೂರಿಗೆ ಯುನೆಸ್ಕೋ ತಂಡದ ಭೇಟಿ
ಮೈಸೂರು, ಫೆ. 26 : ನವದೆಹಲಿಯಲ್ಲಿನ ಯುನೆಸ್ಕೋ ನಿರ್ದೇಶಕ ಮಿಸ್ ಮಿನ್ಜಾಯಂಗ್ ಇವರ ನೇತೃತ್ವದಲ್ಲಿ ಯುನೆಸ್ಕೋ ತಂಡದ ಇತರ ಸದಸ್ಯರಾದ ಮಿಸ್ ನಿಕೋಲ್, ಫ್ರಾನ್ಸ್ನ ಮಿಸ್ಟರ್ ಪೌಲ್ ಟ್ರಯಿಲೋಡ್, ಫ್ರಾನ್ಸ್ನ ಮಿಸ್ಟರ್ ಗೆರಾರ್ಡ್ ಗ್ಯಾಸಲೀನ್ ಅವರು ಮೈಸೂರಿಗೆ ಭೇಟಿ ನೀಡಿ ವೀಕ್ಷಿಸಿದರು.
ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳು, ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಮೈಸೂರು ನಗರ, ಪಾರಂಪರಿಕ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಇತರೇ ಸ್ಟೇಕ್ ಹೋಲ್ಡರ್ ಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದು , ಮೈಸೂರಿನ ಸುತ್ತಮುತ್ತ ಪಾರಂಪರಿಕ ಸಂರಕ್ಷಣಾ ಚಟುವಟಿಕೆಗಳ ಬಗ್ಗೆ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸುವ ಬಗ್ಗೆ ಚರ್ಚಿಸಿದರು.
ಪಾರಂಪರಿಕ ಘಟಕ ಸ್ಥಾಪಿಸುವ, ಮಹತ್ವದ ತರಬೇತಿ ಮತ್ತು ಕಟ್ಟಡ ಚಟುವಟಿಕೆಗಳ ಸಾಮರ್ಥ್ಯ, ನಗರದ ಒಳಭಾಗದಲ್ಲಿನ ಸಂಚಾರವನ್ನು ಗುರುತಿಸುವುದು. ಸಾಮಾಜಿಕ ಆರ್ಥಿಕತೆಯ ಅಧ್ಯಯನ ಮಾಡುವುದು, ಸ್ಪಷ್ಟವಾದ ಮತ್ತು ಅಸ್ಪಷ್ಟವಾದ ಸ್ಮಾರಕಗಳನ್ನು , ವಿಷಯಗಳನ್ನು ಪಟ್ಟಿ ಮಾಡುವ ಬಗ್ಗೆ ಚರ್ಚಿಸಲಾಯಿತು. ಅನುಷ್ಠಾನಗೊಳಿಸುವ ಪ್ರಕ್ರಿಯೆಯನ್ನು ಸಹ ಸುದೀರ್ಘವಾಗಿ ಚರ್ಚಿಸಲಾಯಿತು.
ಈಗಾಗಲೇ ಗುರುತಿಸಲ್ಪಟ್ಟಿರುವ ಅಧಿಸೂಚಿತ ಕಟ್ಟಡಗಳು, ಹೆಚ್ಚುವರಿ ಸ್ಮಾರಕಗಳನ್ನು ಪಟ್ಟಿ ಮಾಡುವುದು, ತಾಂತ್ರಿಕತೆಯ ನಿಯಂತ್ರಣಕ್ಕಾಗಿ ನಿಬಂಧನೆಗಳನ್ನು ರೂಪಿಸುವುದು, ಖಾಸಗಿ ಮಾಲೀಕರಿಗೆ ಪ್ರೋತ್ಸಾಹ ನೀಡುವುದು, ಖಾಸಗಿ ಮಾಲೀಕತ್ವದ ತಾಂತ್ರಿಕತೆಯನ್ನು ತಿಳಿದುಕೊಳ್ಳುವ ಬಗ್ಗೆಯೂ ಸಹ ವಿವರವಾಗಿ ಚರ್ಚಿಸಲಾಯಿತು. ಮಾಸ್ಟರ್ ಪ್ಲಾನ್ಗಳನ್ನು ಸಿದ್ಧಪಡಿಸುವ ಪ್ರಕ್ರಿಯೆ ಬಗ್ಗೆಯೂ ಸಹ ಸಾಯಿ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈ ಲಿ., ಅವರೊಂದಿಗೆ ಚರ್ಚಿಸಲಾಯಿತು ಮತ್ತು ಪಾರಂಪರಿಕ ದೃಷ್ಠಿಕೋನದ ಬಗ್ಗೆ ಮೈಸೂರು ನಗರದ ಮುಂದಿನ ಮಾಸ್ಟರ್ ಪ್ಲಾನ್ನಲ್ಲಿ ಅಳವಡಿಸುವ ಬಗ್ಗೆ ನಿಶ್ಚಯಿಸಲಾಯಿತು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ರಾಯ್ಕರ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
40 ಸಾವಿರಕ್ಕೆ 10 ಜ್ಯೋತಿರ್ ಲಿಂಗಗಳ ದರ್ಶನ!
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications