ಬೆಳಗಾವಿ ಗಡಿ ತಂಟೆ, ರಕ್ತ ಹರಿಸಲೂ ಸಿದ್ಧ, ಛಗನ್
ಕೊಲ್ಲಾಪುರ, ಫೆ. 25 : ಗಡಿ ಭಾಗದ ಮರಾಠಿಗರಿಗೆ ಅನ್ಯಾಯವಾದರೆ ಸಹಿಸಲು ಸಾಧ್ಯವಿಲ್ಲ. ಅಂಥ ಪ್ರಸಂಗ ಎದುರಾದರೆ ರಕ್ತ ಹರಿಸಲೂ ಸಿದ್ಧ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಛಗನ್ ಭುಜಬಲ್ ಕರ್ನಾಟಕಕ್ಕೆ ಸವಾಲು ಹಾಕಿದ್ದಾರೆ.
ಕೊಲ್ಲಾಪುರದಲ್ಲಿ ಮಂಗಳವಾರ ಎಂಇಎಸ್ ಕೃಪಾಪೋಷಿತ ಸಂಘಟನೆಗಳು ಏರ್ಪಡಿಸಿದ್ದ ಭವ್ಯ ಸೀಮಾ ಪರಿಷದ್ ದಲ್ಲಿ ಅವರು ಮಾತನಾಡಿದರು. ಮಹಾಜನ್ ಆಯೋಗ ಮರಾಠಿಗರಿಗೆ ಅನ್ಯಾಯ ಮಾಡಿದೆ. ಗಡಿ ತಂಟೆಯ ಸಮಸ್ಯೆ ಬಿಡಿಸಲು ಚಳವಳಿ ಇನ್ನಷ್ಟು ತೀವ್ರಗೊಳಿಸಲಾಗುವುದು. 50 ವರ್ಷಗಳಿಂದ ಕರ್ನಾಟಕದಲ್ಲಿ ಮರಾಠಿಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇನ್ನು ಮುಂದೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ಗಡಿ ಸಮಸ್ಯೆ ಇತ್ಯರ್ಥವಾಗದೆ ನೆನೆಗುದಿಗೆ ಬಿದ್ದಿದೆ. ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಮರಾಠಿ ಭಾಷಿಕರ ಭಾವನೆಯನ್ನು ಅರ್ಥಮಾಡಿಕೊಳ್ಳಬೇಕು. ಮರಾಠಿಗರ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.
(ದಟ್ಸ್ ಕನ್ನಡ ವಾರ್ತೆ)
ಬೆಳಗಾವಿ ವಿವಾದ, ಮಹಾರಾಷ್ಟ್ರ ನಿಯೋಗಕ್ಕೆ ಛೀಮಾರಿ












Click it and Unblock the Notifications