ಮಾರ್ಚ್ ತಿಂಗಳಲ್ಲಿ ಅಭ್ಯರ್ಥಿ ಪಟ್ಟಿ ಬಿಡುಗಡೆ, ದೇಶಪಾಂಡೆ
ಬೆಂಗಳೂರು, ಫೆ. 23 : ಫೆಬ್ರುವರಿ 25 ರಂದು ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಈ ಮೊದಲು ಘೋಷಣೆ ಮಾಡಿತ್ತು. ಆದರೆ, ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿಯನ್ನು ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಅಜಾದ್ ಅವರಿಗೆ ವಹಿಸಿಕೊಂಡಿರುವುದರಿಂದ ಪಟ್ಟಿ ಬಿಡುಗಡೆ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಹೇಳಿದರು.
ಮಂಗಳೂರಿನಲ್ಲಿ
ಮಾಧ್ಯಮ
ಪ್ರತಿನಿಧಿಗಳೊಂದಿಗೆ
ಮಾತನಾಡುತ್ತಿದ್ದ
ಅವರು,
ಮಾರ್ಚ್
15ರೊಳಗೆ
ಮೊದಲ
ಪಟ್ಟಿ
ಬಿಡುಗಡೆ
ಮಾಡಲಾಗುವುದು
ಎಂದರು.
ರಾಜ್ಯ
ಉಸ್ತುವಾರಿ
ಹೊತ್ತಿರುವ
ಗುಲಾಮ್
ನಬಿ
ಅಜಾದ್
ಅವರಿಗೆ
ರಾಜ್ಯ
ರಾಜಕೀಯ
ಸಂಪೂರ್ಣ
ಚಿತ್ರಣ
ಮನವರಿಕೆಯ
ನಂತರ
ಪಟ್ಟಿ
ಬಿಡುಗಡೆ
ಪ್ರಕ್ರಿಯೆಗೆ
ಚಾಲನೆ
ನೀಡಲಾಗುವುದು
ಎಂದು
ಹೇಳಿದರು.
ರೈತರ
ಮನವೊಲಿಸಿ,
ಡಿಕೆಶಿ
ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣ ಕೈ ಹಾಕಿರುವ ರಾಜ್ಯ ಸರ್ಕಾರ ರೈತರ ವಿರೋಧ ಕಟ್ಟಿಕೊಂಡು ಯೋಜನೆ ಕಾರ್ಯರೂಪಕ್ಕೆ ಸರಿಯಲ್ಲ. ಚಾಗನೂರು ಮತ್ತು ಸಿರಿವಾರ ರೈತರ ಬೇಕು, ಬೇಡಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದರ ಜೊತೆಗೆ ಅವರ ಮನವೂಲಿಸಿ ವಿಮಾನ ನಿಲ್ದಾಣ ಕಾಮಗಾರಿಗೆ ಆರಂಭಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಸರ್ಕಾರವನ್ನು ಒತ್ತಾಯಿಸಿದರು. ವಿಮಾನ ನಿಲ್ದಾಣ ಕಾಮಗಾರಿಗೆ ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ. ಆದರೆ, ರೈತರ ಸಮಸ್ಯೆಯನ್ನು ಈಡೇರಿಸಿ ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)