ಶಿವಮೊಗ್ಗ, ಬೆಂಗಳೂರು ಇಂಟರ್ ಸಿಟಿಗೆ ಅಸ್ತು
ನವದೆಹಲಿ, ಫೆ. 21: ರೈಲ್ವೆ ಬಜೆಟಿನಲ್ಲಿ ಕರ್ನಾಟಕಕ್ಕೆ ಆದ ತಾರತಮ್ಯದ ವಿರುದ್ಧ ರಾಜ್ಯಸಭೆಯ ಉಪ ಸಭಾಪತಿ ರೆಹಮಾನ್ ಖಾನ್ ಸದನದಲ್ಲೇ ಪ್ರಶ್ನಿಸಿದಾಗ ಎಚ್ಚೆತ್ತ ಕೇಂದ್ರ ರೈಲ್ವೆ ಸಚಿವ ಲಾಲುಪ್ರಸಾದ್ ಯಾದವ್ ಶಿವಮೊಗ್ಗ ಮತ್ತು ಬೆಂಗಳೂರಿನ ನಡುವೆ ಇಂಟರ್ ಸಿಟಿ ರೈಲು ಪ್ರಾರಂಭಿಸುವುದಾಗಿ ಘೋಷಿಸಿದರು.
ಉಪ ಸಭಾಪತಿ ರೆಹಮಾನ್ ಖಾನ್ ಸಭಾಪತಿ ಸ್ಥಾನದಲ್ಲಿದ್ದಾಗ ರೈಲ್ವೆ ಬಜೆಟ್ ಮೇಲೆ ಲಾಲೂ ಮಾತನಾಡುತ್ತಿದ್ದರು. ಆಗ ಕರ್ನಾಟಕದ ಎರಡು ಬೇಡಿಕೆಗಳ ಬಗ್ಗೆ ಖಾನ್ ಅವರು ಲಾಲು ಗೆ ಚೀಟಿ ಕಳುಹಿಸಿದರು. ಒಂದು ಶಿವಮೊಗ್ಗ - ಬೆಂಗಳೂರು, ಇನ್ನೊಂದು ಬೆಂಗಳೂರು - ಮೈಸೂರು ಜೋಡಿ ಮಾರ್ಗ ಕಾಮಗಾರಿಯನ್ನು ತ್ವರಿತಗೊಳಿಸುವುದು. ಚೀಟಿ ನೋಡಿದ ತಕ್ಷಣ ಲಾಲೂ, ಖಾನ್ ಅವರ ಎರಡೂ ಬೇಡಿಕೆಯನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿಯೇ ಬಿಟ್ಟರು.
ಶಿವಮೊಗ್ಗ ಮತ್ತು ಬೆಂಗಳೂರಿನ ನಡುವೆ ಇಂಟರ್ ಸಿಟಿ ರೈಲು ಓಡಿಸಲು ಲಾಲೂ ಅನುಮತಿ ನೀಡಿರುವುದಕ್ಕೆ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಉಪ ಸಭಾಪತಿ ರೆಹಮಾನ್ ಖಾನ್ ಲಾಲೂ ಅವರನ್ನು ಅಭಿನಂದಿಸಿದ್ದಾರೆ.
(ಏಜೆನ್ಸೀಸ್)
ಮಧ್ಯಂತರ ರೈಲ್ವೆ ಬಜೆಟ್09 ಮುಖ್ಯಾಂಶಗಳು












Click it and Unblock the Notifications