ಹಿಂದುಳಿದ ತಾಲೂಕುಗಳಿಗೆ ಸತತ ವಿದ್ಯುತ್ ಪೂರೈಕೆ
ಬೆಂಗಳೂರು, ಫೆ.20: ನಿರಂತರ ಜ್ಯೋತಿ ಯೋಜನೆಯಡಿ ರಾಜ್ಯದ ಹಿಂದುಳಿದ ತಾಲೂಕುಗಳಿಗೆ 24 ಗಂಟೆಗಳ ಸತತ ಸಿಂಗಲ್ ಫೇಸ್ ಪೂರೈಕೆ ಹಾಗೂ 8 ಗಂಟೆಗಳ ಪೂರ್ಣ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಯಡಿಯೂರಪ್ಪ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.
ನಿರಂತರ ಜ್ಯೋತಿ ಯೋಜನೆಯನ್ನು ಮಾಲೂರಿನಲ್ಲಿ ಪ್ರಾರಂಭಿಸಲಾಗಿದ್ದು, ಹಂತಹಂತವಾಗಿ ರಾಜ್ಯದ ಎಲ್ಲ ತಾಲೂಕುಗಳಿಗೆ ವಿಸ್ತರಿಸಲಾಗುತ್ತದೆ ಎಂದು ಅವರು ತಿಳಿಸಿದರು. ಹಾಗೆಯೇ ರಾಜ್ಯದ ಗುಡಿಸಲು ಮತ್ತು ತಾಂಡಗಳಿಗೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ಗಂಗಾ ಕಲ್ಯಾಣ ಯೋಜನೆಯಡಿ 10 ಸಾವಿರ ಬಡ ಕುಟುಂಬಗಳಿಗೆ ನೀರಾವರಿ ಪಂಪ್ ಸೆಟ್ ಗಳ ವಿದ್ಯುದೀಕರಣ ಮಾಡಲು ರು.100 ಕೋಟಿ ವೆಚ್ಚ ಮಾಡಲಾಗುತ್ತದೆ. ರೈತರಿಗೆ ಉಚಿತ ವಿದ್ಯುತ್ ನೀಡಲು ರು.2,100 ಕೋಟಿ ಸಹಾಯಧನ ನೀಡಲು ಬಜೆಟ್ ನಲ್ಲಿ ಉದ್ದೇಶಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಶಿಕ್ಷಣ ನೀರಾವರಿ ಕೃಷಿಗೆ ಸಿಂಹಪಾಲು
ನಗರಾಭಿವೃದ್ಧಿ,ಚಿಲ್ಲರೆಪಲ್ಲರೆಗೆ ಕರಡಿಪಾಲು
ಟಿವಿ, ವಾಷಿಂಗ್ ಮೆಷಿನ್ ಗೃಹಬಳಕೆ ವಸ್ತುಗಳು ಅಗ್ಗ












Click it and Unblock the Notifications