ಕಾಂಗ್ರೆಸ್ ಸಂಸದ ಎನ್ ವೈ ಹನುಮಂತಪ್ಪ ಬಿಜೆಪಿಯಿಂದ ಸ್ಪರ್ಧೆ
ಬೆಂಗಳೂರು, ಫೆ. 17 : ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಎನ್ ವೈ ಹನುಮಂತಪ್ಪ ಬಿಜೆಪಿ ಸೇರುವ ಸಾಧ್ಯತೆಗಳಿವೆ. ವಾಲ್ಮೀಕಿ ನಾಯಕ ಜನಾಂಗಕ್ಕೆ ಸೇರಿದವರಾದ ಹನುಮಂತಪ್ಪ ಚಿತ್ರದುರ್ಗದ ಹಾಲಿ ಸಂಸದ. ಕ್ಷೇತ್ರ ಪುನರ್ ವಿಂಗಡನೆ ಬಳಿಕ ಚಿತ್ರದುರ್ಗ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಇದೀಗ ಅವರಿಗೆ ಕ್ಷೇತ್ರ ಇಲ್ಲದಾಗಿದ್ದು, ಬಿಜೆಪಿ ಸೇರಿಕೊಂಡು ಬಳ್ಳಾರಿಯಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಶ್ರೀರಾಮುಲು ಸಚಿವ ಸ್ಥಾನ ತೊರದು ಲೋಕಸಭೆಗೆ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಆದ್ದರಿಂದ ಬಳ್ಳಾರಿ ಆಯ್ಕೆ ಜಟಿಲವಾಗಿತ್ತು. ಬಳ್ಳಾರಿ ಕ್ಷೇತ್ರ ರೆಡ್ಡಿ ಸಹೋದರರ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದು, ಅದನ್ನು ಉಳಿಸಿಕೊಳ್ಳಲು ಹನುಮಂತಪ್ಪ ಅವರನ್ನು ಪಕ್ಷಕ್ಕೆ ಕರೆತಂದು ಸ್ಪರ್ಧೆಗಿಳಿಸಲಿದ್ದಾರೆ ಎನ್ನಲಾಗಿದೆ. ಹನುಮಂತಪ್ಪ ಕೂಡ ಬಿಜೆಪಿ ಸೇರಲು ಆಸಕ್ತಿ ವಹಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
* ತುಮಕೂರು - ವೈ ಎನ್ ನಾರಾಯಣಸ್ವಾಮಿ, ಕಿರಣಕುಮಾರ್
* ಬೀದರ್ - ಗುರುಪಾದಪ್ಪ ನಾಗಮಾರಪಲ್ಲಿ
* ರಾಯಚೂರು - ರಾಜಾ ಅಮರೇಶ ನಾಯಕ
* ಕೊಪ್ಪಳ - ಎಂ ಎಸ್ ಪಾಟೀಲ್, ನಾಗಪ್ಪ ಸಾಲೋಣಿ
* ಮಂಗಳೂರು - ನಳಿನ್ ಕುಮಾರ್ ಕಟೀಲ್
* ಹಾವೇರಿ - ನಿಂಗರಾಜ್ ಪಾಟೀಲ್, ಶಿವಕುಮಾರ್ ಉದಾಸಿ
* ಚಿಕ್ಕೋಡಿ - ರಮೇಶ್ ಕತ್ತಿ, ಎಸ್ ಎಸ್ ಪಾಟೀಲ್
* ಕೋಲಾರ - ಡಿ ಎಸ್ ವೀರಯ್ಯ, ದೊಡ್ಡ ಚೌಡಪ್ಪ
* ಹಾಸನ - ಬಿ ಶಿವರಾಂ
* ಮಂಡ್ಯ - ಡಿ ಸಿ ತಮ್ಮಣ್ಣ
* ಬೆಂಗಳೂರು ಗ್ರಾಮಾಂತರ - ಪ್ರೇಮಚಂದ್ರ ಸಾಗರ್
* ಬೆಂಗಳೂರು ಸೆಂಟ್ರಲ್ - ಉದಯ್ ಗರುಡಾಚಾರ್, ಪಿ ಸಿ ಮೋಹನ್
* ಬೆಂಗಳೂರು ಉತ್ತರ - ಡಿ ಸುಧಾಕರ್, ಎನ್ ವೆಂಕಟಾಚಲ
* ಚಾಮರಾಜನಗರ - ಬೆಂಕಿ ಮಹದೇವ್
(ದಟ್ಸ್ ಕನ್ನಡ ವಾರ್ತೆ)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications