ಪ್ರಣಬ್ ಮುಖರ್ಜಿ ಅವರಿಂದ ಬಜೆಟ್ ಮಂಡನೆ
ನವದೆಹಲಿ, ಫೆ. 16 : ಕುಸಿಯುತ್ತಿರುವ ಅಭಿವೃದ್ಧಿ ಬೆಳವಣಿಗೆ ಹಾಗೂ ಸೊರಗಿದ ಉದ್ಯೋಗ ಪರ್ವಗಳ ನಡುವೆ ಕೇಂದ್ರ ಸರ್ಕಾರ ಇಂದು ಮಧ್ಯಂತರ ಬಜೆಟ್ ಮಂಡಿಸಲಿದೆ.ಸುಮಾರು 11 ಗಂಟೆ ವೇಳೆಗೆ ಪ್ರಧಾನಿ ಅವರ ಅನುಪಸ್ಥಿತಿಯಲ್ಲಿ ಪ್ರಣಬ್ ಮುಖರ್ಜಿ ಅವರು ಬಜೆಟ್ ಮಂಡಿಸಲಿದ್ದಾರೆ. ಇನ್ನೊಂದೇ ವಾರದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗುವ ಸೂಚನೆ ಇರುವುದರಿಂದ ಇದೊಂದು ಚುನಾವಣಾ ಬಜೆಟ್ ಎಂದು ವಿಶ್ಲೇಷಿಸಲಾಗುತ್ತಿದೆ.
ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಸೆಣಸುವುದರ ಜೊತೆಗೆ ಮತದಾರರನ್ನು ಓಲೈಸುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಮಧ್ಯಂತರ ಬಜೆಟ್ ಸಿದ್ಧಪಡಿಸಿದೆ ಎನ್ನಲಾಗಿದೆ. ಭಾನುವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬಜೆಟ್ ಪ್ರತಿ ಮತ್ತು ಭಾಷಣಕ್ಕೆ ಸಮ್ಮತಿ ಸೂಚಿಸಿದರು. ಹಾಗೂ ಸಂಪ್ರದಾಯದಂತೆ ಅದನ್ನು ಸಮ್ಮತಿಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟರು.
ಐದು ವರ್ಷಗಳ ಆಡಳಿತದಲ್ಲಿ ಆರಂಭಿಸಿರುವ ಕಾರ್ಯಕ್ರಮಗಳಿಗೆ ಹೆಚ್ಚಿನ ಆಧ್ಯತೆ ನೀಡುವುದು. ಜೊತೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಗೃಹ ನಿರ್ಮಾಣ ಯೋಜನೆಗಳತ್ತ ವಿಶೇಷ ಗಮನ ಹರಿಸುವುದು ಈ ಬಾರಿಯ ಬಜೆಟ್ ಉದ್ದೇಶವಾಗಿದೆ. ತಾನು ಆರಂಭಿಸಿರುವ ಭಾರತ್ ನಿರ್ಮಾಣ, ಸರ್ವ ಶಿಕ್ಷಾ ಅಭಿಯಾನ ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳಿಗೆ ಯುಪಿಎ ಸರ್ಕಾರ ಹೆಚ್ಚು ಹಣ ಒದಗಿಸುವ ನಿರೀಕ್ಷೆ ಇದೆ.
(ದಟ್ಸ್ ಕನ್ನಡ ವಾರ್ತೆ)
2009-10ರ ಕೇಂದ್ರ ಬಜೆಟ್ ಗೆ ಮಿಶ್ರ ಪ್ರತಿಕ್ರಿಯೆ
ಬಜೆಟ್, ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ಸುಣ್ಣ












Click it and Unblock the Notifications