ರಾಜಕೀಯದಲ್ಲಿ ಭಾರಿ ಬದಲಾವಣೆ, ಭವಿಷ್ಯ
ಬೆಂಗಳೂರು, ಫೆ. 15 : ಮೂವತ್ತು ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುವ ಯಮಕಿಂಕರ ಯೋಗವು ಗೋಚರವಾಗಿರುವ ಹಿನ್ನೆಲೆಯಲ್ಲಿ ಫೆ 14 ರ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದು ಅಧ್ಯಾತ್ಮಿಕ ಗುರು ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸಿಂಹರಾಶಿಯಲ್ಲಿ ಶನಿ ಸಂಚಾರ ಹಾಗೂ ಶನಿ ಕ್ಷೇತ್ರಗಳಾದ ಕುಂಭ, ಮಕರ ರಾಶಿಯಲ್ಲಿ ರವಿ ಸಂಚಾರ ಸಮಯ ಇರುವುದಕ್ಕೆ ಯಮಕಿಂಕರ ಯೋಗ ಎನ್ನುತ್ತಾರೆ. ಪರಸ್ಪರ ದೃಷ್ಟಿ ಇರುವ ಈ ಗ್ರಹಗಳ ಫಲ ವಿಪರೀತವಾಗಿರುವುದರಿಂದ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ರಾಜಕೀಯ ವ್ಯಕ್ತಿಗಳಲ್ಲಿ ಮಿತ್ರ ದ್ರೋಹ, ನಂಬಿಕೆ ದ್ರೋಹ ಹಾಗೂ ಅನುಮಾನ ಜಾಸ್ತಿಯಾಗುತ್ತಿದೆ. ಸ್ತ್ರೀಯರಲ್ಲಿ ಅಸಮಾಧಾನವುಂಟಾಗಿ ಅತ್ಮಹತ್ಯಾ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ. ಪ್ರಕೃತಿ ವಿಕೋಪ, ಬೆಂಕಿ ಅನಾಹುತ, ಗಾಳಿಯಿಂದ ಹರಡುವ ರೋಗಗಳು ಉಲ್ಬಣಗೊಳ್ಳುತ್ತವೆ. ರಾಜಕೀಯ ಕ್ಷೇತ್ರದಲ್ಲಿ ವೃದ್ಧರ ಸ್ಥಾನವನ್ನು ಯುವಕರು ಅಲಂಕರಿಸುತ್ತಾರೆ. ಗುರು, ಶಿಷ್ಯನ ಸ್ಥಾನ ಅಲಂಕರಿಸಿ ಭ್ರಷ್ಟನಾಗುತ್ತಾನೆ. ಶಿಷ್ಯ ಗುರುವಿನ ಸ್ಥಾನ ಅಲಂಕರಿಸಿ ಪ್ರಚಲಿತಕ್ಕೆ ಬರುತ್ತಾನೆ. ದೊಡ್ಡ ಕಂಪನಿಗಳು ನಷ್ಟ ಅನುಭವಿಸಿದರೆ, ಚಿಕ್ಕ ಕಂಪನಿಗಳು ಪ್ರವರ್ಧಮಾನಕ್ಕೆ ಬರುತ್ತವೆ.
ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಗಳು ಚಿಕ್ಕ ಕೆಲಸದಲ್ಲಿ ತೃಪ್ತಿ ಹೊಂದುತ್ತಾರೆ. ಸಣ್ಣ ಸ್ಥಾನವುಳ್ಳ ವ್ಯಕ್ತಿಗಳಿಗೆ ಅತಿ ದೊಡ್ಡ ಪಟ್ಟ ಬರುತ್ತದೆ ಎಂದು ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಕಾಂಗ್ರೆಸ್ ಜತೆ ಮೈತ್ರಿ ಇಲ್ಲ :ಎಚ್ ಡಿ ದೇವೇಗೌಡ












Click it and Unblock the Notifications