ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿ ಸಂಕಲ್ಪ ಸಮಾವೇಶ
ಹುಬ್ಬಳ್ಳಿ ಫೆ,12: ಭಾರತೀಯ ಸಂಸ್ಕೃತಿಯ ಅರಿವು ಹಾಗೂ ನೈತಿಕ ಶಿಕ್ಷಣದ ಕೊರತೆ ಇಂದಿನ ಕೆಲವು ಯುವಜನ ಹಾಗೂ ವಿದ್ಯಾರ್ಥಿಗಳು ಭಯೋತ್ಪಾದನೆ ಹಿಂಸಾಕೃತ್ಯದ ಚಟುವಟಿಕೆಗಳತ್ತ ಗಮನ ಹರಿಸುವಂತಾಗಿದೆ . ಆದುದರಿಂದ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಪ್ರಾಥಮಿಕ , ಪ್ರೌಢ ಹಾಗೂ ಕಾಲೇಜು ಶಿಕ್ಷಣದಲ್ಲಿ ಪರಿಣಾಮಕಾರಿ ನೈತಿಕ ಶಿಕ್ಷಣವನ್ನು ನೀಡಲು ಕ್ರಮಕೈಕೊಳ್ಳಲಾಗುವುದು . ಇದರಿಂದ ಯುವಜನರು ತಪ್ಪು ಮಾರ್ಗದಲ್ಲಿ ನಡೆಯುವರನ್ನು ಸ್ಥಗಿತಗೊಳಿಸುವದಷ್ಟೇ ಅಲ್ಲ ಭಯೋತ್ಪಾದನೆ ಕುರಿತು ಸದಾಜಾಗೃತರಾಗಿರಬೇಕು ಎಂಬುದು ರಾಜ್ಯ ಸರ್ಕಾರದ ಆಶಯ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ನುಡಿದರು .
ಅವರು ಹುಬ್ಬಳ್ಳಿಯಲ್ಲಿಂದು ಉನ್ನತ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಜರುಗಿದ ಭಯೋತ್ಪಾದನೆ ಅಳಿಸಿ - ದೇಶ ಉಳಿಸಿ ಧ್ಯೇಯದ ವಿದ್ಯಾರ್ಥಿ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು . ಹಿಂದೆ ಬಾಂಬ್ ಎಸೆದು ಓಡಿಹೋಗುತ್ತಿದ ಭಯೋತ್ಪಾದಕರು ಇಂದು ದೇಶದ ಪಟ್ಟಣಗಳಲ್ಲಿ ನಿಂತು ಯುದ್ದ ತೆರನಾದ ಪರಿಸ್ಥಿತಿ ನಿರ್ಮಿಸುವಷ್ಟು ಪ್ರಬಲರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಸೇನೆ ಹಾಗೂ ಪೊಲೀಸರೇ ಭಯೋತ್ಪಾದಕರ ದಮನ ಮಾಡಲಿ ಎಂದು ಸುಮ್ಮನಿರಕೂಡದು . ದೇಶದ ಅನಕ್ಷರಸ್ಥ ಪ್ರಜೆಗಳು ಹಲವಾರು ಭಯೋತ್ಪಾದಕರ ಸೆರೆ ಹಿಡಿಯಲು ಸಹಕಾರ ನೀಡಿದ್ದಾರೆ . ಅಂತಹುದರಲ್ಲಿ ಅಕ್ಷರಸ್ಥ , ಜ್ಞಾನವಂತ , ಸಾಮಾಜಿಕ , ಬದ್ದತೆಯುಳ್ಳವರಾದ ವಿದ್ಯಾರ್ಥಿಗಳು ಇಂತಹ ವಿಚ್ಚಿದ್ಧೃಕಾರಿ ಶಕ್ತಿಗಳ ಬಗ್ಗೆ ಸದಾ ಜಾಗೃತರಾಗಿದ್ದು ಅಂತಹವರ ವಿವರವನ್ನು ಪೊಲೀಸರಿಗೆ ತಿಳಿಸುವ ಕರ್ತ್ಯವ್ಯ ನಿಭಾಯಿಸಬೇಕು . ಶಾಲಾ ಕಾಲೇಜು ಕ್ಯಾಂಪಸ್ಗಳಲ್ಲಿ , ಮನೆಗಳ ನೆರೆ ಹೊರೆಯಲ್ಲಿ ಇಂತಹ ಚಟುವಟಿಕೆಗಳು ಕಂಡಲ್ಲಿ ಅವುಗಳನ್ನು ಮಟ್ಟ ಹಾಕಲು ಸಿದ್ಧರಾಗಬೇಕು . ಅವರಿವರೆನ್ನದೇ ಎಲ್ಲರೂ ಒಟ್ಟಾಗಿ ಸೇರಿ ಭಯೋತ್ಪಾದನೆ ಅಳಿಸಿ ಹಾಕಲು ಪಣ ತೊಡಬೇಕು ಎಂದು ಲಿಂಬಾವಳಿ ಕರೆ ನೀಡಿದರು .
ರಾಷ್ಟ್ರೀಯ ಭಾವ ಜಾಗೃತಿ ಮುಖ್ಯ:ಸಮಾವೇಶದ ಮುಖ್ಯ ಅತಿಥಿಗಳಲೊಬ್ಬರಾದ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ , ಭಯೋತ್ಪಾದನೆ ವಿರುದ್ದ ಜನಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಈ ಕ್ಷಣದಲ್ಲಿ ಆಗಬೇಕಾದ ಕೆಲಸ , ಯುವಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಿ ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದೆ . ಈ ಅಭಿಯಾನಕ್ಕೆ ಪಕ್ಷಭೇಧವಿಲ್ಲದೆ ರಾಷ್ಟ್ರೀಯ ಭಾವ ಜಾಗೃತಿ ಮುಖ್ಯವಾಗಿದೆ . ಭಯೋತ್ಪಾದನೆಯ ವಿವಿಧ ಮುಖಗಳನ್ನು ನಾವಿಂದು ಕಾಣುತ್ತಿದ್ದು . ಯುವಜನರು ಮನಸ್ಸು ಮಾಡಿದರೆ ಬದಲಾವಣೆ ಹರಿಕಾರರಾಗಿ ಈಗಿನ ಭಯಾನಕ ಪರಿಸ್ಥಿತಿಯನ್ನು ಬದಲಿಸಬಹುದಾಗಿದೆ . ಈ ಗುರುತರ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ . ಈ ನಿಟ್ಟಿನಲ್ಲಿ ಭಾರತ ಇಡೀ ಜಗತ್ತಿಗೆ ಮಾರ್ಗದರ್ಶಿಯಾಗುವಂತೆ ನಮ್ಮ ಹೊಣೆಯನ್ನು ನಾವು ನಿಭಾಯಿಸಬೇಕು ಎಂದು ನುಡಿದರು .
ರಾಜ್ಯದ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ , ಭಯೋತ್ಪಾದನೆ ಮಾನವ ಕುಲಕ್ಕೆ ವೈರಿಯಾಗಿದೆ . ಇದಕ್ಕೆ ಹೆದರದೆ ಅದನ್ನು ಸಹಿಸದೇ ಅದರ ನಿರ್ಮೂಲನೆಗೆ ಸೆಡ್ಡು ಹೊಡೆದು ನಿಲ್ಲಬೇಕು . ಯುವಜನರು ಜಾಗೃತರಾಗಿ ಅದರ ಸಂಪೂರ್ಣ ನಿರ್ನಾಮ ಸಾಧ್ಯ ಎನ್ನುವ ಸಂದೇಶ ಸಾರಿ ಅದಕ್ಕೆ ತಕ್ಕ ಕರ್ತವ್ಯ ನಿಭಾಯಿಸಬೇಕು . ಯಾವುದೇ ಧರ್ಮ , ಭಾಷೆ , ಮುಖ , ನೀತಿ ಇಲ್ಲದ ಭಯೋತ್ಪಾದಕ ಶಕ್ತಿ ಈ ದೇಶದದಿಂದಲೇ ನಿರ್ನಾಮಗೊಳಿಸುವ ಪರಿಸ್ಥಿತಿಯನ್ನು ಯುವಜನತೆ ನಿರ್ಮಿಸಬೇಕು ಎಂದು ನುಡಿದರು .
ಜನಾಂದೋಲನಕ್ಕೆ ಕರೆ: ಸಂಸದ ಪ್ರಲ್ಹಾದ ಜೋಶಿ ಅವರು ಮಾತನಾಡಿ ದೇಶದಲ್ಲಿ ಭಯೋತ್ಪಾದನೆಯ ಅಟ್ಟಹಾಸದ ಹುಟ್ಟಡಗಿಸಲು ಅದರ ವಿರುದ್ದ ಹೋರಾಡುತ್ತಿರುವ ಸೈನಿಕರು ಹಾಗೂ ಪೊಲೀಸರ ಹೋರಾಟಕ್ಕೆ ಸ್ಥೈರ್ಯ ತುಂಬಲು ಇಂದು ಭಯೋತ್ಪಾದನೆ ವಿರುದ್ದದ ಜನಜಾಗೃತಿ ಅವಶ್ಯವಾಗಿದೆ . ದೇಶ ನುಸುಳುಕೋರರ ವಿರುದ್ದ ಜನಾಂದೋಲನ ನಡೆಯಬೇಕಿದೆ . ಜನ ಜಾಗೃತರಾಗಬೇಕಿದೆ . ನಮ್ಮ ಸುತ್ತಮುತ್ತಲು ನಡೆಯುವ ಸಂಗತಿಗಳ ಕುರಿತು ನಾವು ಎಚ್ಚರವಹಿಸಿ ತರ್ಕ ಹಾಗೂ ಜಾಗೃತ ಪರಿಸ್ಥಿತಿಯ ಮೂಲಕ ಭಯೋತ್ಪಾದನೆ ಅಳಿಸಲು ನಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ ಎಂದರು .
ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಅವರು ಮಾತನಾಡಿ ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಭಯೋತ್ಪಾದನಾ ಚಟುವಟಿಕೆಗಳನ್ನು ನಿರ್ನಾಮ ಮಾಡುವುದು ಪ್ರತಿಯೊಂದು ಸರ್ಕಾರ ಹಾಗೂ ಜನಸಮುದಾಯದ ಕರ್ತವ್ಯ . ರಾಜ್ಯ ಸರ್ಕಾರ ಜನರಲ್ಲಿ ವಿಶೇಷವಾಗಿ ಯುವಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಯುದ್ದೋಪಾದಿಯಲ್ಲಿ ಕ್ರಮಕೈಕೊಂಡಿದೆ ಎಂದರು .
ನಿವೃತ್ತ ಬಿಷಪ್ ಡಾ. ಪಿ. ಜೆ. ಕೆ . ಬಲ್ಮಿ ಮಾತನಾಡಿ , ನಾವೆಲ್ಲರೂ ಭಾರತೀಯರು , ನಮ್ಮ ಜನ್ಮ ಭೂಮಿ ಕುರಿತು ಗೌರವ ಹಾಗೂ ಎಂಬ ಎಕತಾಭಾವ ನಮಗಿರಬೇಕು . ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕತೆಯ ಹಲವು ಮುಖಗಳು ಅದರ ಶಕ್ತಿಗಳು ವರ್ಧನೆಗೊಳ್ಳುತ್ತಿರುವುದು ಕಳವಳಕಾರಿ ಸಂಗತಿ . ವಿವಿಧ ಧರ್ಮಗಳಿಗೆ ಸೇರಿದ್ದರೂ ನಾವೆಲ್ಲ ಮಾನವ ಧರ್ಮದವರು ಎಂಬುದನ್ನು ಮರೆಯಲಾಗದು . ಅವರವರ ಆಚಾರ , ನಂಬಿಕೆ , ಅವರಿಗೆ ಆಚರಿಸಲು ಬಿಟ್ಟು , ಶಾಂತಿ , ತಾಳ್ಮೆ , ಸ್ಥೈರ್ಯದಿಂದ ಇರುವ ಪರಿಸ್ಥಿತಿ ನಿರ್ಮಿಸಬೇಕಿದೆ . ಯಾವುದೇ ಭಯೋತ್ಪಾದಕರಿಗೆ ಶಿಕ್ಷೆ ತೀವ್ರ ಗತಿಯಲ್ಲಿ ಆಗುತ್ತಿಲ್ಲ . ಯುವಶಕ್ತಿ ಪರಿಸ್ಥಿಗಳ ಬಲಿಪಶುವಾಗದೇ ಎಚ್ಚರಿಕೆ ವಹಿಸಿ ದೇಶವನ್ನು ಉಳಿಸಬೇಕು ಎಂದು ನುಡಿದರು .
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಎಸ್. ಕೆ . ಸೈದಾಪೂರ ಅವರು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆ ಯುವ ವಿದ್ಯಾರ್ಥಿಗಳಿಗೆ " ಬಲಿಷ್ಠ ಭಾರತ ನಿರ್ಮಾಣಕ್ಕೆ , ಭಯೋತ್ಪಾದನೆ ಬೆಂಬಲಿಸುವದಿಲ್ಲ , ಅದರ ವಿರುದ್ದ ಹೋರಾಡುವ ಸೈನಿಕರು ಹಾಗೂ ಪೊಲೀಸರಿಗೆ ಸಹಕಾರನೀಡುತ್ತೇನೆ , ದೇಶಬಾಂಧವರ ಮೇಲೆ " ಆಕ್ರಮ ಎಸುಗುವ ಎಲ್ಲ ಭಯೋತ್ಪಾದಕ ಕೃತ್ಯಗಳನ್ನು ಖಂಡಿಸುವುದಾಗಿ ಸಂಕಲ್ಪ ಪ್ರಮಾಣ ವಚನ ಬೋಧಿಸಿದರು .
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಬೃಹತ್ ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಮಾತನಾಡಿ , ಭಯೋತ್ಪಾದನೆ ಕೃತ್ಯಗಳಲ್ಲಿ ಯುವಕರು ಭಾಗಿಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ . ಭಯೋತ್ಪಾದನೆ ಎಂಬುದು ಒಂದು ರಾಷ್ಟ್ರದ ಪಿಡುಗಾಗದೇ ಇಡೀ ಜಗತ್ತಿಗೆ ವಿಸ್ತರಿಸಿದೆ . ನಮ್ಮ ಸ್ಥಳೀಯ ಮಟ್ಟದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಅವಕಾಶವಿಲ್ಲದಂತೆ ಎಚ್ಚರಿಕೆ ವಹಿಸುವ ಮೂಲಕ ರಾಜ್ಯದಲ್ಲಿ , ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಅಳಿಸಿ ಹಾಕಬಹುದು . ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರು ಬಯಸಿದ ಬಲಿಷ್ಠರ , ಸಮೃಧ್ಧ , ಸುಭಿಕ್ಷ ಭಾರತ ನಿರ್ಮಾಣಕ್ಕೆ ಯುವಶಕ್ತಿಯಿಂದು ಸಂಕಲ್ಪ ತೊಡಬೇಕು . ಯುವಜಾಗೃತಿಯ , ಈ ಅಭಿಯಾನ ಇತರ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ಸಚಿವರು ನುಡಿದರು .
ಸಮಾವೇಶದ ಸಾನಿಧ್ಯ ವಹಿಸಿದ್ದ ಮೂರುಸಾವಿರಮಠದ ಗುರುಸಿದ್ದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು . ಶಾಸಕರುಗಳಾದ ಚಂದ್ರಕಾಂತ ಬೆಲ್ಲದ , ಎಸ್. ಐ. ಚಿಕ್ಕನಗೌಡ್ರ , ವೀರಭದ್ರಪ್ಪ ಹಾಲಹರವಿ , ಹು. ಧಾ. ಮ. ಪಾಲಿಕೆಯ ಮಹಾಪೌರ ರಾಧಾಬಾಯಿ ಸಪಾರೆ , ಉಪ - ಮಹಾಪೌರ ಚಂದ್ರಶೇಖರ ಮನಗುಂಡಿ , ಕವಿವಿ ಕುಲಸಚಿವ ವಿ. ರಂಗಸ್ವಾಮಿ , ವಿದ್ಯಾರ್ಥಿ ಜಾಗೃತಿ ಅಭಿಯಾನ ಧಾರವಾಡ ವಿಭಾಗದ ಅಧ್ಯಕ್ಷ ಎ. ಜಿ. ರವಿಶಂಕರ ಕಾಕಡೆ ಅವರು ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿದ್ದರು .
ಪ್ರಾರಂಭದಲ್ಲಿ , ವಿದ್ಯಾರ್ಥಿ ಜಾಗೃತ ಅಭಿಯಾನ ಸಮಿತಿ ಸದಸ್ಯ ಕೆ . ಎಸ್. ಜಯಂತ ಸರ್ವರನ್ನು ಸ್ವಾಗತಿಸಿದರು . ಇದಕ್ಕೂ ಪೂರ್ವದಲ್ಲಿ ಹುಬ್ಬಳ್ಳಿಯ ವಿವಿಧ ಕಾಲೇಜುಗಳ ಪ್ರಾಚಾರ್ಯರು , ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಯೋತ್ಪಾದನಾ ವಿರುದ್ದ ಜಾಗೃತಿ ಮಾಡಿಸುವ ಬೃಹತ್ ರ್ಯಾಲಿ ಮೂಲಕ ನೆಹರು ಕ್ರೀಡಾಂಗಣಕ್ಕೆ ಆಗಮಿಸಿದರು .
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications