ಫೆ. 13 ರಿಂದ ಟಿಪ್ಪು ಸ್ಮರಣಾರ್ಥ ವಿವಿಧ ಕಾರ್ಯಕ್ರಮ
ಬೆಂಗಳೂರು, ಫೆ. 11 : ಟಿಪ್ಪು ಸುಲ್ತಾನ್ ಸ್ಮರಣಾರ್ಥ ವಿವಿಧ ಕಾರ್ಯಕ್ರಮಗಳನ್ನು ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಂಟಿಯಾಗಿ ಏರ್ಪಡಿಸುತ್ತಿದೆ. ಫೆ 11 ರಿಂದ 13 ರವರೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಿವಿಧ ತಂಡದವರಿಂದ ನೃತ್ಯರೂಪಕ ನಾಟಕ ಹಾಗೂ ಜಾನಪದ ಗೀತೆಗಳ ಕಾರ್ಯಕ್ರಮ ಏರ್ಪಡಿಸಿದೆ.
ಫೆಬ್ರುವರಿ 11ರಂದು ಶರಣಪ್ಪ ವಡಿಗೇರ ಅವರಿಂದ ಲಾವಣಿ ಹಾಗೂ ಶುಭಾ ಧನಂಜಯ ಅವರಿಂದ 'ಮೈಸೂರು ಹುಲಿ ಟಿಪ್ಪು ಸುಲ್ತಾನ್' ನೃತ್ಯ ರೂಪಕ, ಫೆಬ್ರುವರಿ 12ರಂದು ಬಸವಲಿಂಗಯ್ಯ ಹಿರೇಮಠ ಅವರಿಂದ ಜನಪದ ಗೀತೆಗಳು ಹಾಗೂ ಫೆಬ್ರುವರಿ 13ರಂದು ಯುವರಾಜ್ ಮತ್ತು ತಂಡದವರಿಂದ ಜನಪದ ಗೀತೆಗಳು ಹಾಗೂ ಬೆಂಗಳೂರು ವಿವೇಕಾನಂದ ಕಲಾ ಕೇಂದ್ರದವರಿಂದ 'ವಂದೇ ಮಾತರಂ' ನೃತ್ಯ ರೂಪಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)
ರಂಗಶಂಕರ:ಸಮಕಾಲೀನ ನೃತ್ಯ/ನಾಟಕ ಹಬ್ಬ












Click it and Unblock the Notifications