ತಪ್ಪಿದ ಮತ್ತೊಂದು ವಿಮಾನ ದುರಂತ
ದಿಸ್ಪುರ್ (ಅಸ್ಸಾಂ), ಫೆ. 11 : ಇತ್ತೀಚೆಗೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ದುರಂತ ಸ್ಲಲ್ಪದರಲ್ಲೇ ತಪ್ಪಿದ ಬೆನ್ನಲ್ಲೇ ಅಂತಹದೇ ಇನ್ನೊಂದು ಘಟನೆ ಆಸ್ಸಾಂದ ದಿಸ್ಪುರ್ ಬಳಿ ನಡೆದಿದೆ. ಮಂಗಳವಾರ ಸಂಜೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಇಂಡಿಯನ್ ಏರ್ ಲೈನ್ಸ್ ಹಾಗೂ (ವಾಯು ಸೇನೆ) ಏರ್ ಕ್ರಾಫ್ಟ್ ನ ಗಜರಾಜ ಎಂಬ ಹೆಸರಿನ ವಿಮಾನಗಳ ಪರಸ್ಪರ ಡಿಕ್ಕಿ ಹೊಡೆಯುವ ಸಂಭವವಿತ್ತು. ಆದರೆ, ಪೈಲೆಟ್ ಗಳ ಚಾಣಕ್ಷತನದಿಂದ ಪವಾಡಸದೃಶ ರೀತಿಯಲ್ಲಿ ಭಾರಿ ದುರಂತವೊಂದು ತಪ್ಪಿದಂತಾಗಿದೆ.
ಇಂಡಿಯನ್ ಏರ್ ಲೈನ್ಸ್ ವಿಮಾನ (ಐಸಿ 206) ಆಸ್ಸಾಂ ನ ದಿಬ್ರುಗಢ್ ದಿಂದ ಕೊಲ್ಕತ್ತಾಕ್ಕೆ ತೆರಳುತ್ತಿತ್ತು. ವಾಯುಯಾನ ಪರಿವೀಕ್ಷಣಾ ಕೇಂದ್ರದ ಪ್ರಕಾರ, ಎರಡು ವಿಮಾನಗಳು 17 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದ್ದವು. ಒಂದೇ ಎತ್ತರದಲ್ಲಿ ಎರಡು ವಿಮಾನಗಳು ಹಾರಾಟ ನಡೆಸಿದ್ದು ಘಟನೆಗೆ ಕಾರಣವಾಗಿದೆ. ಇದೊಂದು ದುರದೃಷ್ಟಕರ ಘಟನೆ ಎಂದು ಅಧಿಕಾರಿಗಳು ವಿಷಾಧಿಸಿದ್ದಾರೆ. ಬುಧವಾರ ನಸುಕಿನ ಜಾವ ಸುಮಾರು 1.20ಕ್ಕೆ ಇಂಡಿಯನ್ ಏರ್ ಲೈನ್ಸ್ ಸುರಕ್ಷಿತವಾಗಿ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications