ನೈಸ್ ಪತ್ರ ಪ್ರಕರಣ, ಮೆತ್ತಗಾದ ದೇವೇಗೌಡ
ಗುಲ್ಬರ್ಗಾ, ಫೆ.5 : 'ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರ ಗೌರವ ಹಾಗೂ ನಂಬಿಕೆ ಇದೆ. ನೈಸ್ ವ್ಯವಹಾರದಲ್ಲಿ ನಡೆದಿರುವ ಅಕ್ರಮಗಳನ್ನು ನ್ಯಾಯಾಲಯದ ಗಮನಕ್ಕೆ ತರುವ ಏಕೈಕ ಉದ್ದೇಶದಿಂದ ನ್ಯಾಯಮೂರ್ತಿಗಳಿಗೆ ಪತ್ರ ಬರೆಯಲಾಗಿತ್ತು' ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಭಾವ ಬೀರಲು ಇಲ್ಲವೆ, ಒತ್ತಡ ಹೇರಲು ಪತ್ರ ಬರೆಯಲಾಗಿಲ್ಲ ಎಂದರು. ನೈಸ್ ಅವ್ಯವಹಾರವನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಬೇಕು ಎನ್ನುವ ದೇವೇಗೌಡರ ಮಹತ್ವಾಕಾಂಕ್ಷೆ ಈಡೇರಿದೆ ಎನ್ನಬಹುದು. ದೇವೇಗೌಡರ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿರುವ ನ್ಯಾಯಾಲಯ, ನೈಸ್ ಹಗರಣವನ್ನು ಲೋಕಾಯುಕ್ತ ಇಲಾಖೆಗೆ ವಹಿಸಿದೆ. ಅಷ್ಟರ ಮಟ್ಟಿಗೆ ದೇವೇಗೌಡರ ಲಾಭ ಆಗಿದೆ ಎಂದು ಹೇಳಲಾಗುತ್ತಿದೆ.
ಆದರೆ, ದೇವೇಗೌಡರ ಪತ್ರಕ್ಕೆ ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ತೀವ್ರ ಆಕ್ಷೇಪ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದವು. ನ್ಯಾಯಾಂಗ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಮೂಗು ತೋರಿಸಬಾರದು ಎಂದು ತಾಕೀತು ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಹೇಳಿಕೆಗಳಿದ್ದರೆ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಗುಲ್ಬರ್ಗಾದಲ್ಲಿ ನೀಡಿರುವ ಹೇಳಿಕೆ ಭಾರಿ ಮಹತ್ವದ್ದಾಗಿದೆ.
(ದಟ್ಸ್ ಕನ್ನಡ ವಾರ್ತೆ)
ನೈಸ್ ತನಿಖೆ ಲೋಕಾಯುಕ್ತಕ್ಕೆ: ಹೈಕೋರ್ಟ್
ನೈಸ್ ವಿರುದ್ಧ ಅನಂತಮೂರ್ತಿ ಸುಪ್ರಿಂಕೋರ್ಟ್ಗೆ












Click it and Unblock the Notifications