ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಕಲ ಧರ್ಮಗಳನ್ನು ಪ್ರೀತಿಸಿ, ಶಿವಕುಮಾರ ಶ್ರೀಗಳು
ದೇಶದ ಸ್ಥಿತಿ ಇಂದು ಹೇಳಿಕೊಳ್ಳುವಂತಿಲ್ಲ. ಕಾರಣಗಳು ಅನೇಕ ಇವೆ. ಗಾಂಧೀಜಿಯವರ ಕನಸಿನ ದೇಶ ಇದಾಗಲಿಲ್ಲ ಎಂದು ಅತೀವ ಬೇಸರ ವ್ಯಕ್ತಪಡಿಸಿದ ಶ್ರೀಗಳು, ಶ್ರಮ ಸಂಸ್ಕೃತಿ ಮರೆತಿದ್ದು, ಅಲ್ಪಶ್ರಮ, ಅಧಿಕ ಲಾಭದಾಸೆ ಎಲ್ಲೆಲ್ಲೂ ಎದ್ದು ಕಾಣುತ್ತಿದೆ. ಬಸವಾದಿ ಶರಣರು ಆಚರಿಸಿ ತೋರಿಸಿದ ಕಾಯಕ-ದಾಸೋಹ ತತ್ವಗಳಿಂದ ದೂರ ಸರಿದಿದ್ದೇವೆ ಎಂದು ವಿಷಾದಿಸಿದರು.
ವಿಜ್ಞಾನವೇನೋ ಅದ್ಭುತವಾಗಿ ಬೆಳೆದಿದೆ. ಅದರೆ, ಅದು ವಿನಾಶಮುಖಿಯಾಗಿತ್ತಿರುವುದು ಶುಭ ಲಕ್ಷಣವಲ್ಲ. ಅದು ವಿಕಾಸಮುಖಿಯಾಗಿ ನಡೆಯಬೇಕಾಗಿದೆ ಎಂದು ಕಿವಿ ಮಾತು ಹೇಳಿದರು. ಎಲ್ಲ ಧರ್ಮಗಳ ಗುರಿಯೂ ಒಂದೇ. ನದಿಗಳೆಲ್ಲ ಹರಿದು ಸೇರುವುದು ಸಮುದ್ರವನ್ನು, ನಮಗಿಂದು ಬೇಕಾಗಿರುವುದು ಆ ಧರ್ಮ, ಈ ಧರ್ಮಗಳಲ್ಲ, ಮಾನವ ಧರ್ಮ, ಸಕಲ ಧರ್ಮದವರಿಗೆ ಲೇಸನ್ನು ಬಯಸುವ ಪರಮಧರ್ಮ ಎಂದು ಶ್ರೀಗಳು ನುಡಿದರು.
(ದಟ್ಸ್
ಕನ್ನಡ
ವಾರ್ತೆ)
ಶಿವಕುಮಾರ
ಸ್ವಾಮಿಗಳ
ಜನ್ಮಶತಮಾನೋತ್ಸವ
Comments
Story first published: Tuesday, February 3, 2009, 12:41 [IST]