ಮಂಗಳೂರು ಬಳಿ ಗುಂಡಿನ ಚಕಮಕಿ; ಓರ್ವ ಸಾವು
ಮಂಗಳೂರು, ಜ. 30: ಮೂರು ಜನ ಶಂಕಿತ ದರೋಡೆಕೋರರು ಮತ್ತು ಪೋಲಿಸರ ನಡುವಿನ ಗುಂಡಿನ ಚಕಮಕಿಯಲ್ಲಿ ಒಬ್ಬ ದರೋಡೆಕೋರ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ. ಇನ್ನಿಬ್ಬರು ದರೋಡೆಕೋರರು ಪರಾರಿಯಾದ ಘಟನೆ ಮಂಗಳೂರು ಸಮೀಪದ ಗುರುಪುರದಲ್ಲಿ ಶುಕ್ರವಾರ ಮುಂಜಾನೆ 4 ಗಂಟೆಯಲ್ಲಿ ನಡೆದಿದೆ.
ಮಾರುತಿ ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಇವರನ್ನು ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆಯಲು ಪ್ರಯತ್ನಿಸಿದಾಗ ಏಕಾಏಕಿ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದರು. ಪೊಲೀಸರು ಪ್ರತಿ ದಾಳಿಗೆ ಮುಂದಾದರು. ಒಬ್ಬ ಪೊಲೀಸರ ಗುಂಡಿಗೆ ಬಲಿಯಾಗಿ ಮತ್ತಿಬ್ಬರು ಪರಾರಿಯಾಗಿದ್ದಾರೆ. ಎನ್ ಕೌಂಟರ್ ನಡೆದ ಸ್ಥಳದಲ್ಲಿ ಎರಡು ಪಿಸ್ತೂಲ್ ಮತ್ತು ಮಾರುತಿ ಓಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸ್ ಅಧೀಕ್ಷಕ ಸತೀಶ್ ಕುಮಾರ್ ತಿಳಿಸಿದ್ದಾರೆ.
ಪಾರಾರಿಯಾದ ಮತ್ತಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಶೋಧ ಕಾರ್ಯ ಮುಂದುವರಿದಿದೆ.ಅವರ ಉದ್ದೇಶ ಏನಾಗಿತ್ತು? ಹಾಗೂ ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿಯ ವಿವರಗಳು ಲಭ್ಯವಾಗಿಲ್ಲ. ತನಿಖೆ ಮುಂದುವರಿದಿದೆ.
(ದಟ್ಸ್ ಕನ್ನಡ ವಾರ್ತೆ)