ಮುಂದೈತೆ ಮಾರಿಹಬ್ಬ: ರತನ್ ಟಾಟಾ ಎಚ್ಚರಿಕೆ!
ಮುಂಬೈ, ಜ.29: ''ಪ್ರಪಂಚದಾದ್ಯಂತ ಮಕಾಡೆ ಮಲಗಿರುವ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಉದ್ಯೋಗಿಗಳೇ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿ. ಕೆಲವೊಂದು ಕಠಿಣ ಸವಾಲುಗಳು ನಿಮಗಾಗಿ ಕಾದಿವೆ'' ಎಂದು ಭಾರತದ ಔದ್ಯಮಿಕ ದಿಗ್ಗಜ ರತನ್ ಟಾಟಾ ಎಚ್ಚರಿಸಿದ್ದಾರೆ.
ಹಣಕಾಸು ಕೊರತೆ, ಗ್ರಾಹಕರಿಗೆ ಶೀಘ್ರವಾಗಿ ಸಾಲ ಸಿಗದಿರುವ ಪರಿಸ್ಥಿತಿಯಂತಹ ಕಾರಣಗಳಿಂದ ಟಾಟಾ ಒಡೆತನ ಸಂಸ್ಥೆಗಳ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ. ಇದು ಸಂಸ್ಥೆಯ ಕೆಲವು ವಿಭಾಗಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ರತನ್ ಟಾಟಾ ಹೇಳಿದ್ದಾರೆ.
ಈ ಬಗ್ಗೆ ಇ-ಮೇಲ್ ಮೂಲಕ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಎಚ್ಚರಿಕೆಯ ಸಂದೇಶವನ್ನು ರತನ್ ಟಾಟಾ ರವಾನಿಸಿದ್ದಾರೆ. ಉದ್ಯೋಗಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಾ ಅವರು ಈ ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಈ ಕುರಿತು ಸಂಸ್ಥೆಯ ಅಧಿಕಾರಿಗಳು ಬಹಿರಂಗ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ನಿರಾಳವಾಗಿದ್ದ ಟಾಟಾ ಸಂಸ್ಥೆಯ ಉದ್ಯೋಗಿಗಳಿಗೆ ಇಂದಿನಿಂದ ನೌಕರಿ ಕಡಿತ ಎಂಬ 'ಗುಮ್ಮ'ನ ಕಾಟ ಶುರುವಾಗಿದೆ!
(ಏಜೆನ್ಸೀಸ್)












Click it and Unblock the Notifications