ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಖ್ಯಾತ ರಂಗ ನಿರ್ದೇಶಕ ಬಾಲಕೃಷ್ಣ ಪೈ ನಿಧನ
ರಾಜ್ಯ ನಾಟಕ ಅಕಾಡೆಮಿ, ಕೊಂಕಣಿ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಬಾಲಕೃಷ್ಣ ಪೈ ತಮ್ಮ ಕುಬ್ಜ ದೇಹಾಕೃತಿಯಿಂದ ಕುಳ್ಳಪ್ಪು ಎಂದೇ ಜನಾನುರಾಗಿಯಾಗಿದ್ದರು. ಹಲವು ನಾಟಕಗಳನ್ನು ನಿರ್ದೇಶಿಸಿದ್ದ ಅವರು ಕೆಲವೊಂದು ನಾಟಕಗಳನ್ನು ರಚಿಸಿದ್ದರು. ನಟನೆಯಲ್ಲೂ ಸೈ ಅನಿಸಿಕೊಂಡು ತಮ್ಮ ಹಾಸ್ಯಾಭಿನಯದಿಂದ ಗಮನ ಸೆಳೆದಿದ್ದರು.
ಬಾಲಕೃಷ್ಣ ಪೈ ಅವರ 'ಮೂರು ಮುತ್ತುಗಳು' ನಾಟಕ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ 600ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್, ವಿಧಾನ ಪರಿಷತ್ ಸದಸ್ಯ ಪ್ರತಾಪ ಚಂದ್ರಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಪೈ ನಿಧನಕ್ಕ್ಕೆ ಸಂತಾಪ ಸೂಚಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, January 24, 2009, 11:44 [IST]