ಯಡಿಯೂರಪ್ಪ ಒಬ್ಬ ಹುಚ್ಚು ಮನುಷ್ಯ, ಉದ್ಧವ್
ಬೆಂಗಳೂರು, ಜ. 22 : ಮಹಾರಾಷ್ಟ್ರದ ಪ್ರತಿಪಕ್ಷದ ನಾಯಕ ರಾಮದಾಸ್ ಕದಂ ಕನ್ನಡಿಗರ ಕೈ ಕಟ್ ಮಾಡುತ್ತೇವೆ ಎನ್ನುವ ಪ್ರಚೋದನಾಕಾರಿ ಹೇಳಿಕೆಯನ್ನು ಇತ್ತೀಚೆಗೆ ನೀಡಿದ್ದರು. ಇದರ ಬೆನ್ನಲ್ಲೇ ಶಿವಸೇನೆ ಪಕ್ಷದ ನಾಯಕ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬ ಹುಚ್ಚು ಮನುಷ್ಯ ಎಂದು ಜರಿಯುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಯೇಡ್ಯಾ ಅಪ್ಪಾ (ಮರಾಠಿ ಭಾಷೆಯಲ್ಲಿ ಹುಚ್ಚು ಮನುಷ್ಯ) ಎಂದು ನಿಂದಿಸಿರುವ ಉದ್ಧವ್, ಯಡಿಯೂರಪ್ಪ ಗಡಿ ವಿಷಯದಲ್ಲಿ ಹುಚ್ಚನಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಪಕ್ಷದ ಹೈಕಮಾಂಡ್ ಕರ್ನಾಟಕ ಸರ್ಕಾರದ ಕುತ್ತಿಗೆ ಪಟ್ಟಿಯನ್ನು ಬಿಗಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ನಾಂದೇಡನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬಿಜೆಪಿ ಮುಖಂಡರು ಗಡಿ ವಿಷಯದಲ್ಲಿ ನಮ್ಮ ರಾಜ್ಯಕ್ಕೆ ಒಂದು ಕರ್ನಾಟಕಕ್ಕೆ ಒಂದು ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು. ಬಿಜೆಪಿ ಈ ವಿಷಯದಲ್ಲಿ ಸ್ಪಷ್ಟ ನಿಲುವು ತಾಳಬೇಕು ಆಮೇಲೆ ಅವರ ಜೊತಿಗಿನ ಮೈತ್ರಿ ಮುಂದುವರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯ ಎಂದು ಉದ್ಧವ್ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಬಸ್ಸಿಗೆ ಬೆಂಕಿ, ರಾಜ್ಯಾದ್ಯಂತ ಕರವೇ ಪ್ರತಿಭಟನೆ
ಕೊಲ್ಲಾಪುರದಲ್ಲಿ ಮತ್ತೆ ಎರಡು ಬಸ್ ಮೇಲೆ ಹಲ್ಲೆ












Click it and Unblock the Notifications