ಸತ್ಯಂ ರಾಜು ಜಾಮೀನು ಅರ್ಜಿ ವಿಚಾರಣೆ ಜ. 22 ಕ್ಕೆ

ಹೈದರಾಬಾದ್, ಜ. 21 : ಸತ್ಯಂ ಕಂಪನಿಯ ಮಾಜಿ ಮುಖ್ಯಸ್ಥ ರಾಮಲಿಂಗರಾಜು ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 22 ಕ್ಕೆ ಹೈದರಾಬಾದ್ ನ್ಯಾಯಾಲಯ ಮುಂದೂಡಿದೆ ಹಾಗೂ ಈ ಅವಧಿಯವರೆಗೊ ಪೊಲೀಸ್ ಬಂಧನವನ್ನು ಕೂಡ ವಿಸ್ತರಿಸಿದೆ. ಹಾಗೆಯೇ ರಾಮಲಿಂಗರಾಜು ಅವರ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಸೆಬಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನೂ ಸಹ ನ್ಯಾಯಾಲಯ ಜನವರಿ 22 ಕ್ಕೆ ಮುಂದೂಡಿದೆ.

ಭಾನುವಾರ ಸತ್ಯಂ ಮಾಜಿ ಹಣಕಾಸು ವಿಭಾಗದ ಮುಖ್ಯಸ್ಥ ವದ್ಲಾಮಣಿ ಶ್ರೀನಿವಾಸ ಸೇರಿದಂತೆ ರಾಮಲಿಂಗರಾಜು ಹಾಗೂ ಅವರ ಸಹೋದರ ರಾಮರಾಜು ಅವರನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ಬಂಧಿತ ಮೂವರು ಆರೋಪಿಗಳು ತನಿಖೆಗೆ ಸಹಕರಿಸುತ್ತಿದ್ದಾರೆ. ಆದರೆ ಯಾವುದೇ ಮಹತ್ವದ ಮಾಹಿತಿ ಹೊರಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸತ್ಯಂ ಕಂಪನಿಯ 7 ಸಾವಿರ ಕೋಟಿಗಳ ಹಗರಣದ ರೂವಾರಿಗಳಾದ ಈ ಮೂವರಿಗೆ ನಗರದ ಚಂಚಲ್ ಗಢದಲ್ಲಿ ಇರಿಸಲಾಗಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗಿದೆ. 6 ಗಂಟೆ ನಂತರ ವಿಚಾರಣೆ ನಡೆಸಬಾರದು ಎಂದು ನ್ಯಾಯಾಲಯ ಪೊಲೀಸರಿಗೆ ತಾಕೀತು ಮಾಡಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+