ಪೊಲೀಸ್ ಗುಂಡಿಗೆ ದರೋಡೆಕೋರರು ಬಲಿ
ನವದೆಹಲಿ, ಜ. 19 : ದೆಹಲಿಯ ಲೋಧಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರೀನ್ ಪಾರ್ಕ್ ಬಳಿ ಇರುವ ಬ್ಯಾಂಕ್ ದರೋಡೆಗೆ ಯತ್ನಿಸಿದ ಉತ್ತರ ಪ್ರದೇಶದ ಮೂಲದ 8 ಜನ ದರೋಡೆಕೋರ ಗುಂಪಿನೊಂದಿಗೆ ಪೊಲೀಸರ ಗುಂಡಿನ ಕಾಳಗ ಮುಂದುವರೆದಿದೆ. ಮೂವರು ಪಾತಕಿಗಳನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶ ಮೂಲಕ ಪಾತಕಿ ಸತ್ತೆ ಅಲಿಯಾಸ್ ಸತ್ಯಪ್ರಕಾಶ ದರೋಡೆಯ ಪ್ರಮುಖ ರೂವಾರಿ ಎನ್ನಲಾಗಿದೆ. ಆತನ ಇಬ್ಬರು ಸಹಚರರು ಸೇರಿ ಒಟ್ಟು ಎಂಟು ಜನರುಳ್ಳ ದರೋಡೋಕೋರರ ತಂಡ ಬ್ಯಾಂಕ್ ದರೋಡೆಗೆ ಯತ್ನಿಸಿದೆ, ಆಗ ಪೊಲೀಸರ ಹಾಗೂ ಪಾತಕಿಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಗುರುದ್ವಾರ ಬಳಿ ಸತ್ಯಾ ಎಂಬ ದರೋಡೆಕೋರನನ್ನು ಪೊಲೀಸರು ಹೊಡೆದು ಉರುಳಿಸಿದ್ದಾರೆ. ಆತನ ಇಬ್ಬರು ಸಹಚರರು ಕೂಡ ಪೊಲೀಸರ ಗುಂಡಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಗುಂಡಿನ ಕಾಳಗ ಮುಂದುವರೆದಿದೆ.
ಗುಂಡಿನ ಕಾಳಗದಲ್ಲಿ ಪೊಲೀಸರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ. ಉತ್ತರ ಪ್ರದೇಶದ ಸತ್ಯಾ ಬ್ಯಾಂಕ್ ದರೋಡೆ ಸೇರಿ ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿಯಾಗಿದ್ದ ತಿಳಿದು ಬಂದಿದೆ.
(ಏಜನ್ಸೀಸ್)