ಮುಂಬೈ ದಾಳಿ, ವಾಷಿಂಗ್ ಟನ್ ಚಲೋ ಬೆಂಬಲಿಸಿ
ಮುಂಬೈ, ಜ. 16 : ಮುಂಬೈ ಕೃತ್ಯವನ್ನು ಖಂಡಿಸಿ U.S.-India Political Action Committee (USINPAC) ಕಳೆದ ವರ್ಷ ಡಿಸೆಂಬರ್ ಒಂದರಿಂದ ವಾಷಿಂಗ್ ಟನ್ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭಾರತೀಯರಿಗೆ ಆನ್ ಲೈನ್ ಮೂಲಕ ತಮ್ಮ ಬೆಂಬಲ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಪಾಪಿ ಪಾಕಿ ವಿರುದ್ಧ ಹೋರಾಟ ನಡೆಸಲು ಇನ್ನಷ್ಟು ಶಕ್ತಿ ನೀಡಲು ಮನವಿ ಮಾಡಿಕೊಂಡಿದೆ. ಭಾರತೀಯರಾದ ನಾವೆಲ್ಲರೂ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲೇಬೇಕು, ಅದು ಪ್ರತಿ ಭಾರತೀಯನ ಕರ್ತವ್ಯ ಕೂಡ ಹೌದು.
ಹೋರಾಟದ ಮುಖ್ಯ ಉದ್ದೇಶ ಪಾಕಿಸ್ತಾನದಲ್ಲಿರುವ ಉಗ್ರರನ್ನು ಉಗ್ರರ ನೆಲೆಯನ್ನು ನಾಶ ಮಾಡಬೇಕು. ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದಿರುವ ಹಾಗೂ ಅಡಗಿಕೊಂಡಿರುವ ಉಗ್ರರನ್ನು ಕೂಡಲೇ ಭಾರತಕ್ಕೆ ಹಸ್ತಾಂತರಿಸಿಬೇಕು. 1993ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ಪಾತಕಿ ದಾವೂದ್ ಇಬ್ರಾಹಿಂನನ್ನು ಕೂಡಲೇ ಭಾರತಕ್ಕೆ ಒಪ್ಪಿಸಬೇಕು ಎನ್ನುವುದು ಈ ಹೋರಾಟದ ಮೂಲ ಉದ್ದೇಶವಾಗಿದೆ.
ಮುಂಬೈ ಭಯೋತ್ಪಾದನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಪೈಶಾಚಿಕೆ ಕೃತ್ಯ. ಸುಮಾರು 180ಕ್ಕೂ ಅಧಿಕ ಅಮಾಯಕ ಮಂದಿ ಪಾಕಿಸ್ತಾನ ಕೃಪಾಪೋಷಿತ ಉಗ್ರರು ನಡೆದ ವಿಧ್ವಂಸಕದಲ್ಲಿ ಪ್ರಾಣ ಕಳೆದುಕೊಂಡರು. ಸತತ ಮೂರು ದಿನಗಳ ಕಾರ್ಯಾಚರಣೆಯಲ್ಲಿ 10 ಉಗ್ರರಲ್ಲಿ ಒಂಬತ್ತು ಉಗ್ರರನ್ನು ಎನ್ ಕೌಂಟರ್ ನಲ್ಲಿ ಕೊಂದು ಹಾಕಲಾಯಿತು. ಮುಂಬೈ ಪೊಲೀಸ್ ಪಡೆ ಹಾಗೂ ರಾಷ್ಟ್ರೀಯ ಭದ್ರತಾ ಪಡೆ ವೀರಯೋಧರ ಸಾಹಸ ದೇಶದ ಸಾರ್ವಭೌಮತೆಯನ್ನು ಕಾಪಾಡಿತು. ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಎನ್ ಕೌಂಟರ್ ತಜ್ಞ ವಿಜಯ್ ಸಲಸ್ಕರ್, ಡಿಸಿಪಿ ಅಶೋಕ್ ಕಾಮ್ಟೆ ಹಾಗೂ ರಾಷ್ಟ್ರೀಯ ಭದ್ರತಾ ಪಡೆಯ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಉಗ್ರರ ಗುಂಡಿಗೆ ಬಲಿಯಾಗಿದ್ದರು.
(ದಟ್ಸ್ ಕನ್ನಡ ವಾರ್ತೆ)
ಹೆಚ್ಚಿನ ಮಾಹಿತಿಗೆ : http://washingtonchalo.com/petition.html