ರಾಜು ವಿಚಾರಣೆ ಜ.16 ಕ್ಕೆ ಮುಂದೂಡಿಕೆ
ಹೈದರಾಬಾದ್, ಜ. 12 : ಸತ್ಯಂ ಕಂಪನಿಯ ಮಾಜಿ ಚೇರಮನ್ ರಾಮಲಿಂಗರಾಜು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜನವರಿ 16 ಕ್ಕೆ ಪ್ರಕರಣವನ್ನು ಮುಂದೂಡಿದೆ. ಈ ಮಧ್ಯೆ ಹೈದರಾಬಾದ್ ಸಿಐಡಿ ಪೊಲೀಸರು ಸತ್ಯಂ ಕಂಪನಿಯ ಮುಖ್ಯ ಕಚೇರಿ ಹಾಗೂ ರಾಜು ನಿವಾಸಕ್ಕೆ ದಾಳಿ ನಡೆಸಿ ಇನ್ನಷ್ಟು ದಾಖಲೆ ಪತ್ರಗಳ ಪರಿಶೀಲನೆ ಮುಂದುವರಿಸಿದೆ.
ಸತ್ಯಂ ಕಂಪನಿ ಹಣಕಾಸು ವಿಭಾಗದ ಮುಖ್ಯಸ್ಥ ವದ್ಲಾಮಣಿ ಶ್ರೀನಿವಾಸ ಅವರನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ನೀಡಿರುವ 18 ಜನರನ್ನು ಹೊಂದಿರುವ ಸಿಐಡಿ ತಂಡ, ಇಂದು ಬೆಳಗ್ಗೆ ಸತ್ಯಂ ಮುಖ್ಯ ಕಚೇರಿ ಹಾಗೂ ರಾಜು ನಿವಾಸದ ಮೇಲೆ ದಾಳಿ ನಡೆಸಿ ಅಗತ್ಯ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ರಾಮಲಿಂಗರಾಜು ರಾಜು ಅವರ ಗೋಲ್ ಮಾಲ್ ಪ್ರಕರಣಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ, ಸತ್ಯಂ ಮುಖ್ಯಸ್ಥ ಇಂತಹ ಗುರುತರವಾದ ವಂಚನೆಯಲ್ಲಿ ಎಸೆಗಿದ್ದಾನೆ ಎಂದರೆ ನಂಬಲು ಸಾಧ್ಯವಾಗದ ಮಾತು ಎಂದು ಹೇಳಿದ್ದಾರೆ. ಸತ್ಯಂ ಕಂಪನಿಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಗೆ ಆಂಧ್ರಪ್ರದೇಶ ಸಿಐಡಿ ಪೊಲೀಸ್ ಸಮರ್ಥವಾಗಿ ತನಿಖೆ ನಡೆಸಲಿದ್ದಾರೆ. ಈ ಹಗರಣದಗಲ್ಲಿ ಯಾವುದೇ ತನಿಖೆ ಸಂಸ್ಥೆಯನ್ನು ಸಹಾಯ ಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸತ್ಯಂ ಹಾಗೂ ಮೇತಾಸ್ ಕಂಪನಿಗಳು ಪಡೆದಿರುವ ಮೆಟ್ರೋ ರೈಲು, ಮಚಲೀಪಟ್ಟಣ ಬಂದರು, ಅನೇಕ ನೀರಾವರಿ ಯೋಜನೆಗಳ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ರೆಡ್ಡಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ರಾಜ್ಯದಲ್ಲಿ ಸತ್ಯಂ, ಮೇತಾಸ್ ಯೋಜನೆಗಳು
ಸತ್ಯಂ ಉದ್ಯೋಗಿಗಳ ಸೆಳೆಯುವುದಿಲ್ಲ:ಇನ್ಫಿ











Click it and Unblock the Notifications