ಮುಷ್ಕರ ಕೈಬಿಟ್ಟ ತೈಲ ಅಧಿಕಾರಿಗಳು
ನವದೆಹಲಿ, ಜ. 9 : ವೇತನ ಪರಿಷ್ಕರಣೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ತೈಲ ಕಂಪನಿಯ ಅಧಿಕಾರಿಗಳು ಹಾಗೂ ನೌಕರರು ನಡೆಸುತ್ತಿದ್ದ ಮುಷ್ಕರ ಶುಕ್ರವಾರ ಮಧ್ಯಾಹ್ನ ಕೈಬಿಟ್ಟಿದ್ದಾರೆ.
ಭಾರತ್ ಪೆಟ್ರೋಲಿಯಂ ಘಟಕದ ಅಧಿಕಾರಿಗಳ ಇಂದು ಮಧ್ಯಾಹ್ನ ಮುಷ್ಕರವನ್ನು ಕೈಬಿಟ್ಟು ಕೆಲಸಕ್ಕೆ ಹಾಜರಾಗಿದ್ದಾರೆ. ಹಿಂದೂಸ್ತಾನ ಪೆಟ್ರೋಲಿಯಂ ಲಿಮಿಟೆಡ್ ಕಂಪನಿಯ ಅಧಿಕಾರಿಗಳು ಗುರುವಾರವೇ ಮುಷ್ಕರವನ್ನು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಪೆಟ್ರೋಲಿಯಂ ಇಲಾಖೆಯ ಕಾರ್ಯದರ್ಶಿ ಆರ್ ಎಸ್ ಪಾಂಡೆ ಸ್ಪಷ್ಟಪಡಿಸಿದ್ದಾರೆ.
ಇಲಾಖೆಯ ಶೇ. 70 ಅಧಿಕಾರಿಗಳು ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ. ಶುಕ್ರವಾರ ಸಂಜೆ ಹೊತ್ತಿಗೆ ಸಂಪೂರ್ಣವಾಗಿ ಎಲ್ಲರೂ ಮುಷ್ಕರವನ್ನು ಕೈಬಿಟ್ಟು ಕೆಲಸಕ್ಕೆ ಹಾಜರಾಗಲಿದ್ದಾರೆ. ಈ ಮೂಲಕ ಯಥಾ ಪ್ರಕಾರ ತೈಲ ಸರಬರಾಜು ಯಥಾ ಸ್ಥಿತಿಗೆ ಮರಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಮುಷ್ಕರದಿಂದ ದೇಶದ್ಯಾಂತ ಭಾರಿ ಸಮಸ್ಯೆ ಉದ್ಭವಿಸಿದ್ದು, ಸಮರ್ಪಕವಾಗಿ ತೈಲ ಹಂಚಿಕೆ ಮಾಡುವ ಉದ್ದೇಶದಿಂದ ಶನಿವಾರ ಹಾಗೂ ಭಾನುವಾರವು ಕೆಲಸ ನಿರ್ವಹಿಸಲಾಗುವುದು ಎಂದು ಭಾರತ್ ಪೆಟ್ರೋಲಿಯಂ ಕಾರ್ಯನಿರ್ವಾಹಕ ಅಧಿಕಾರಿ ಎಸ್ ರಾಧಾಕೃಷ್ಣನ್ ತಿಳಿಸಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ನಗರದ
ಹಲವೆಡೆ
ಪೆಟ್ರೋಲ್,
ಡಿಸೇಲ್
ಲಭ್ಯ