ಹೆಗ್ಗಡೆ, ಪೇಜಾವರ ಶ್ರೀಗಳಿಗೆ ನಕ್ಸಲರಿ೦ದ ಎಚ್ಚರಿಕೆ
ಬೆಂಗಳೂರು, ಜ.6 : ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮೇಲೆ ಆಕ್ರೋಶ ವ್ಯಕ್ತ ಪಡಿಸಿರುವ ನಕ್ಸಲರು ಮಾಧ್ಯಮಗಳಿಗೆ ಇಮೇಲ್ ಮೂಲಕ ಸಂದೇಶ ರವಾನಿಸಿದ್ದಾರೆ.
ಪೇಜಾವರ ಶ್ರೀಗಳು ಮತ್ತು ಹೆಗ್ಗಡೆಯವರ ಕಲ್ಯಾಣ ಕಾರ್ಯಕ್ರಮಗಳು ಜನರಲ್ಲಿ ಒಡಕು ಉಂಟುಮಾಡುವ ಹಾಗೂ ನಮ್ಮ ಹೋರಾಟವನ್ನು ಬಲಹೀನ ಮಾಡುವ ತಂತ್ರ ಎಂದು ಆರೋಪಿಸಿವೆ. ಧರ್ಮಸ್ಥಳ ದೇವಾಲಯದ ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳ ಹಿಂದೆ ಜನರ ಕಲ್ಯಾಣದ ಉದ್ದೇಶವಿಲ್ಲ, ತಮ್ಮ ಭೂಮಿಯನ್ನು ರಕ್ಷಿಸಿಕೊಳ್ಳುವ ಉದ್ದೇಶ ಅಷ್ಟೇ ಎಂದು ನಕ್ಸಲರು ಟೀಕಿಸಿದ್ದಾರೆ.
ಪೇಜಾವರ ಮಠದ ಮತ್ತು ಧರ್ಮಸ್ಥಳದ ಎರಡೂ ಧಾರ್ಮಿಕ ಸಂಸ್ಥೆಗಳು ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ ನಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಇಮೇಲ್ ಸಂದೇಶದಲ್ಲಿ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications