ಸರ್ವಜ್ಞನಗರ ಕಾಮಗಾರಿ ಪರೀಶೀಲಿಸಿದ ಕಟ್ಟಾ
ಬೆಂಗಳೂರು, ಜ. 5: ಐಟಿ, ಬಿಟಿ, ವಾರ್ತಾ, ಅಬಕಾರಿ ಹಾಗೂ ಜಲಮಂಡಳಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಇಂದು ಬೆಳಿಗ್ಗೆ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿ ಹಲವು ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಚಿವರನ್ನು ಭೇಟಿ ಮಾಡಿ ನಾಗರಿಕರು ಸಲ್ಲಿಸಿದ ಅಹವಾಲುಗಳನ್ನು ಸ್ವೀಕರಿಸಿ, ಈ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ವಾರ್ಡ್ ನಂ. 11ರ ಮಳೆನೀರು ಚರಂಡಿಗಳು, ಗೋವಿಂದಪುರ, ಎಚ್ಬಿಆರ್ ಬಡಾವಣೆ ಎರಡನೇ ಹಂತದಲ್ಲಿ ನಿರ್ಮಿಸಲಾಗುತ್ತಿರುವ ಮಳೆನೀರು ಚರಂಡಿ, ಬಸವಲಿಂಗಪ್ಪ ನಗರ, ಬಾಣಸವಾಡಿ, ಆರ್.ಎಸ್. ಪಾಳ್ಯದಲ್ಲಿ ಖಾಲಿ ಇರುವ ಸರ್ಕಾರಿ ಜಮೀನಿನಲ್ಲಿ ಬಡವರಿಗೆ ಮನೆಗಳು ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವ ಉದ್ಯಾನವನ ಗ್ರಂಥಾಲಯ, ಕ್ರೀಡಾಂಗಣ ನಿರ್ಮಿಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳದಲ್ಲೇ ಸಲಹೆ, ಸೂಚನೆಗಳನ್ನು ನೀಡಿದರು.
ಸ್ಥಳ
ಪರಿಶೀಲನೆಯ
ಸಂದರ್ಭದಲ್ಲಿ
ಸರ್ವಜ್ಞ
ನಗರದ
ಶಾಸಕ
ಕೆ.ಜೆ.
ಜಾರ್ಜ್
ಹಾಜರಿದ್ದು,
ಸ್ಥಳೀಯ
ಸಮಸ್ಯೆಗಳ
ಕುರಿತು
ಸಚಿವರಿಗೆ
ಮಾಹಿತಿ
ನೀಡಿದರು.
ಬೆಂಗಳೂರು
ಮಹಾನಗರ
ಪಾಲಿಕೆ,
ಬೆಂಗಳೂರು
ನಗರಾಭಿವೃದ್ಧಿ
ಪ್ರಾಧಿಕಾರ
ಹಾಗೂ
ಬೆಂಗಳೂರು
ಜಲಮಂಡಳಿ
ಅಧಿಕಾರಿಗಳು
ಈ
ಸಂದರ್ಭದಲ್ಲಿ
ಹಾಜರಿದ್ದರು.
(ದಟ್ಸ್
ಕನ್ನಡ
ವಾರ್ತೆ)
ಲಾರಿ
ಮುಷ್ಕರ,
ಸರಕು
ಸಾಗಣೆ
ಅಸ್ತವ್ಯಸ್ತ