ಹುತಾತ್ಮನ ಪತ್ನಿಯಾಗಿ ಹೆಮ್ಮೆ: ಕವಿತಾ ಕರ್ಕರೆ

ಮುಂಬೈ ಭಯೋತ್ಪಾದನೆ ನಂತರ ಪ್ರಥಮ ಬಾರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ನವೆಂಬರ್ 26 ದೇಶದ ಮೇಲೆ ಉಗ್ರರು ಅಟ್ಟಹಾಸ ಮೆರೆದ ದಿನ. ಅದು ನನ್ನ ಪಾಲಿನ ಕರಾಳ ದಿನವೂ ಹೌದು. ನನ್ನ ಗಂಡ ಧೀರ ಅಧಿಕಾರಿ ಹೇಮಂತ್ ನನ್ನು ಕಳೆದುಕೊಂಡ ದಿನ ಎನ್ನಲಿಕ್ಕೆ ಮನಸ್ಸು ಹಾತೊರೆಯುತ್ತದೆ. ಆದರೆ, ಆತ ಮಾಡಿರುವ ಸಾಧನೆ ನೆನಪಿಸಿಕೊಂಡರೆ ಎಲ್ಲವೂ ಮರೆಯಾಗುತ್ತದೆ ಎಂದು ಕವಿತಾ ವಿವರಿಸಿದರು.
ನವೆಂಬರ್ 26 ರಂದು ನಡೆದ ಉಗ್ರರೊಂದಿಗೆ ಕಾಳಗದಲ್ಲಿ ಹೇಮಂತ್ ಗೆ ಬರೀ ಗಾಯವಾಗಿರಬಹುದು ಎಂದುಕೊಂಡಿದ್ದೆ. ವಿಷಯ ತಿಳಿದ ತಕ್ಷಣ ಆಸ್ಪತ್ರೆಯತ್ತ ದಾಪುಗಾಲಿಟ್ಟೆ, ಅದರೆ, ಹೇಮಂತ್ ನ ಎದೆಗೆ ಮೂರು ಗುಂಡು ಸೇರಿಕೊಂಡು ತೀವ್ರವಾಗಿ ಗಾಯಗೊಂಡ ಅವರು ಕೊನೆಯುಸಿರೆಳೆದಿದ್ದರು. ಆಗ ನನ್ನ ಕರುಳು ಕಿತ್ತು ಬಂದಿತು. ಮೂವರು ಮಕ್ಕಳು ಸೇರಿ ನನ್ನನ್ನು ಕೂಡ ನಡುನೀರಿನಲ್ಲಿ ಕೈಬಿಟ್ಟು ಹೋದನಲ್ಲ ಎಂದು ಕುಸಿದು ಕುಳಿತೆ. ಹಿರಿಯ ಮಗಳನ್ನು ಮದುವೆ ಮಾಡಿಕೊಟ್ಟಾಗಿದೆ. ಉಳಿದ ಇಬ್ಬರು ಮಕ್ಕಳ ಮುಂದಿನ ಜೀವನ ಹೇಗೆ ಎನ್ನುವುದೆ ನನಗೆ ಏಕೈಕ ಚಿಂತೆಯಾಗಿತ್ತು ಎಂದು ಹೇಳಿದರು.
ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷಯವನ್ನು ಬೇಧಿಸಿದ ಹೇಮಂತ್ ಕೆಲ ರಾಜಕೀಯ ನಾಯಕರಿಂದ ಭಾರಿ ಟೀಕೆಗೆ ಒಳಗಾಗಿದ್ದರು. ಆದರೆ ಹೇಮಂತ್ ಎಂದಿಗೂ ತನ್ನ ಸಮಸ್ಥಿತಿಯನ್ನು ಕಳೆದುಕೊಂಡವರಲ್ಲ. ದೇವರ ಮೇಲೆ ಅಪಾರ ಭಕ್ತ ಹಾಗೂ ಪ್ರೀತಿ ಹೊಂದಿದ್ದ ಕರ್ಕರೆ, ಎಲ್ಲವನ್ನೂ ದೇವರೇ ನೋಡಿಕೊಳ್ಳತ್ತಾನೆ ಎಂದು ಹೇಳುತ್ತಿದ್ದರು.
ಮಾಲೇಗಾಂವ್ ಸ್ಫೋಟ ಘಟನೆಯಲ್ಲಿ ಕೆಲ ಹಿಂದೂ ಧಾರ್ಮಿಕ ಮುಖಂಡರು ಇರುವುದು ಪ್ರಕರಣದಿಂದ ತಿಳಿಯಿತು. ಇದನ್ನು ಹೊರಗೆಡವುತ್ತಿದ್ದಂತೆಯೇ ಕಲ ಹಿಂದೂ ಸಂಘಟನೆಗಳು ಅವರ ವಿರುದ್ಧ ಅಪಪ್ರಚಾರ ಮಾಡಿದರು. ಆಗ ಅವರು ಸ್ವಲ್ಪ ಧೃತಿಗೆಟ್ಟಿದ್ದರು. ಆಗ ನಾನೇ ಮುಂದೆ ನಿಂತು ಅವರನ್ನು ಹುರುದುಂಬಿಸಿದೆ. ಅವರ ಹತ್ತಿರ ಸಾಕ್ಷಿಗಳಿದ್ದವು, ತನಿಖೆಗೆ ಸರ್ಕಾರ ಅಗತ್ಯ ನೆರವು ನೀಡಿತು. ಈ ಎಲ್ಲ ಕಾರಣಗಳಿಂದ ತನಿಖೆ ನಿರಾತಂಕವಾಗಿ ಮುಗಿಸಿ ಆರೋಪಿಗಳನ್ನು ಬಂಧಿಸಲು ಹೇಮಂತ್ ಕರ್ಕರೆ ಯಶಸ್ವಿಯಾದರು ಎಂದು ಕವಿತಾ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications