ಪಾಕ್ ಪರ ನಿಂತ ಊಸರವಳ್ಳಿ ಅಮೆರಿಕ
ಇಸ್ಲಾಮಾಬಾದ್, ಜ. 2 : ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ನಿನ್ನೆ ಮೊನ್ನೆಯವರೆಗೂ ಭಾರತದ ಪರ ನಿಂತಿದ್ದ ಅಮೆರಿಕ ಪಾಕಿಗಳ ಕ್ರಮವನ್ನು ಖಂಡಿಸಿತ್ತು. ಪಾಕ್ ನೆಲೆದಲ್ಲಿ ಅಡಗಿರುವ ಉಗ್ರರನ್ನು ಸದೆಬಡಿಯುವಂತೆ ಗುಡುಗಿತ್ತು. ಭಾರತ ಪಾಕಿಸ್ತಾನದ ಮೇಲೆ ಯುದ್ಧ ಮಾಡಲಿದೆ ಎನ್ನುವ ಅಂಶವನ್ನು ಅಮೆರಿಕ ಗುಪ್ತಚರ ಸಂಸ್ಥೆ ಹೇಳಿತ್ತು.
ಈ ಎಲ್ಲ ಬೆಳವಣಿಗೆ ನಂತರ ಇಂದು ಏಕಾಏಕಿ ತನ್ನ ಮಾತು ಬದಲಿಸಿದ ಅಮೆರಿಕ, ಪಾಕ್ ನಲ್ಲಿ ಸಿಕ್ಕಿ ಬಿದ್ದಿರುವ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವುದು ಬೇಡ. ಪಾಕ್ ಸರ್ಕಾರ ವಿಚಾರಣೆ ನಡೆಸಿ ಶಿಕ್ಷಿಸಲಿ ಎಂದು ಅಪ್ಪಣೆ ಹೊರಡಿಸಿದ ಸುದ್ದಿ ಅಮೆರಿಕ ವೈಟ್ ಹೌಸ್ ಮೂಲಗಳಿಂದ ತಿಳಿದು ಬಂದಿದೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.
ಅಮೆರಿಕದ ಬುಷ್ ಸರ್ಕಾರ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದು, ಕಳೆದ ವರ್ಷ ನವೆಂಬರ್ 26 ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದನೆಯಲ್ಲಿ ಭಾಗಿಯಾಗಿರುವ ಆರೋಪಿಗಳ ಸಂಪೂರ್ಣ ವಿಚಾರಣೆ ನಡೆಸಿ ಶಿಕ್ಷೆಗೆ ಗುರಿಪಡಿಸಿ ಎಂದು ಬುಷ್ ಸರ್ಕಾರ ಪಾಕ್ ಸರ್ಕಾರಕ್ಕೆ ಸೂಚಿಸಿದೆ ಎಂದು ಪತ್ರಿಕೆ ವರದಿ ಮಾಡಿದೆ. ಅಮೆರಿಕದ ಈ ಹೇಳಿಕೆ ಭಯೋತ್ಪಾದನೆಯನ್ನು ನಿರ್ನಾಮ ಮಾಡಬೇಕು ಎಂದು ಭಾರತ ತೊಟ್ಟಿರುವ ಪಣಕ್ಕೆ ಭಾರಿ ಹಿನ್ನೆಡೆ ಎನ್ನಲಾಗುತ್ತದೆ.
ಭಾರತ ಸರ್ಕಾರ ಮುಂಬೈ ಭಯೋತ್ಪಾದನೆಯ ನಂತರ ಪಾಕಿಸ್ತಾನದ ಮೇಲೆ ಭಾರಿ ಒತ್ತಡ ಹೇರಿತ್ತು. ಪಾಕ್ ನೆಲೆದಲ್ಲಿ ಅಡಗಿರುವ ಭಾರತಕ್ಕೆ ಬೇಕಿರುವ ಮೊಸ್ಟ್ ವಾಟೆಂಡ್ ಭಯೋತ್ಪಾದಕರನ್ನು ಕೂಡಲೇ ಭಾರತಕ್ಕೆ ಹಸ್ತಾಂತರಿಸಿ ಎಂದು ಆಗ್ರಹಿಸಿತ್ತು. ಭಾರತ ಒತ್ತಾಯಕ್ಕೆ ಅಮೆರಿಕ ಸೇರಿ ಅಂತಾರಾಷ್ಟ್ರೀಯ ಸಮುದಾಯದಿಂದ ಭಾರಿ ಬೆಂಬಲ ವ್ಯಕ್ತವಾಗಿತ್ತು. ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅಂತೂ ಪಾಕ್ ಸರ್ಕಾರದ ವಿರುದ್ಧ ಕೆಂಡ ಕಾರಿದ್ದರು. ಉಗ್ರರಿಗೆ ಹಸ್ತಾಂತರಿಸದಿದ್ದರೆ ಉಗ್ರ ಕ್ರಮ ಎದುರಿಸಬೇಕಾಗುತ್ತದೆ ಎನ್ನುವ ಸ್ಪಷ್ಟವಾದ ಎಚ್ಚರಿಕೆಯನ್ನೂ ನೀಡುತ್ತಲೇ ಬಂದಿದ್ದರು.
(ದಟ್ಸ್
ಕನ್ನಡ
ವಾರ್ತೆ)
ಜನವರಿ
6ರವರೆಗೆ
ಕಸಬ್
ಕಸ್ಟಡಿ
ವಿಸ್ತರಣೆ
ಯುದ್ಧಕ್ಕೆ
ನಾವು
ರೆಡಿಯಾಗಿದ್ದೇವೆ:ಪಾಕ್