ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮಾತೆ ವಿಷ್ಯದಲ್ಲಿ ಪಾಕ್ ಜಾಣ ಕುರುಡು

By Staff
|
Google Oneindia Kannada News

ನವದೆಹಲಿ, ಜ. 2 : ಲಷ್ಕರ್ ಇ ತೊಯ್ಬಾ ಸಂಬಂಧಿಸಿದ ನಿಷೇಧಿತ ಜಮಾತ್ ಉದ್ ದವಾ ಸಂಘಟನೆ ತನ್ನ ಹೆಸರನ್ನು ಬದಲಿಸಿಕೊಳ್ಳಲು ಮುಂದಾಗಿದೆ. ಮುಂಬೈ ಉಗ್ರರ ದಾಳಿಯಲ್ಲಿ ಪಾಕ್ ಮೂಲದ ಈ ಸಂಘಟನೆಯ ಕೈವಾಡವಿದೆ ಎನ್ನಲಾಗಿದ್ದು. ಅಮೆರಿಕ ಭದ್ರತಾ ಮಂಡಳಿ ಮತ್ತು ಪಾಕಿಸ್ತಾನ ಸರ್ಕಾರದ ಸಂಘಟನೆಯನ್ನು ನಿಷೇಧಿಸಿದೆ. ಈ ಸಂಘಟನೆ ತನ್ನ ಚಟುವಟಿಕೆಯನ್ನು ತೆಹ್ರೀಕ್-ಇ-ಹರ್ಮತ್-ಇ-ರಸೂಲ್ (ಟಿಎಚ್ ಆರ್) ಹೆಸರಲ್ಲಿ ಮುಂದುವರಿಸಲು ಸಂಘಟನೆ ನಿರ್ಧರಿಸಿದೆ ಎದು ಮೂಲಗಳು ತಿಳಿಸಿವೆ.

ಇತ್ತೀಚಿಗಷ್ಟೇ ಟಿಎಸ್ಆರ್ ಹೆಸರಿನಡಿಯಲ್ಲಿ ಸಂಘಟನೆಯ ಕೆಲವು ಮುಖಂಡರು ಪಾಕಿಸ್ತಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದರು. ಇದೇ ಹೆಸರಿನಲ್ಲಿ ಜಮಾತೆ ಉದ್ ದವಾ ಚಟುವಟಿಕೆಗಳು ಮುಂದುವರಿಯಲಿವೆ ಎಂದು ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಏಳು ವರ್ಷಗಳ ಹಿಂದೆಯೇ ಅಮೆರಿಕದಿಂದ ನಿಷೇಧಕ್ಕೆ ಒಳಗಾಗಿದ್ದ ಲಷ್ಕರ್ ಇ ತೊಯ್ಬಾ ಸಂಘಟನೆ ಜಮಾತೆ ಉದ್ ದವಾ ಹೆಸರಿನಲ ಮೇಲೆ ಸಕ್ರಿಯವಾಗಿತ್ತು.

ಜಮಾತೆ ಉದ್ ದವಾ ಹೆಸರಿಗೆ ಮಾತ್ರ ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದೆ. ಆದರೆ ಸಂಘಟನೆಯ ಕಾರ್ಯಚಟುವಟಿಕೆಗಳು ನಿರಾಂತಕವಾಗಿ ಮುಂದುವರಿದಿವೆ. ಪಾಕ್ ಈ ವಿಚಾರದಲ್ಲಿ ಜಾಣ ಕುರುಡನಂತೆ ವರ್ತಿಸತೊಡಗಿದೆ. ಲಾಹೋರ್ ಸಮೀಪದ ಸಂಘಟನೆಯ ಮುಖ್ಯ ಕಚೇರಿಯಲ್ಲಿ ಕಾರ್ಯ ಕಲಾಪಗಳು ಮುಂದುವರಿದಿವೆ. ಮಾಧ್ಯಮದ ಕಣ್ಣೊರೆಸಲು ಸಂಘಟನೆ ಮುಖಂಡ ಹಫೀಜ್ ಮೊಹ್ಮದ್ ಸಯೀದ್ ಅವರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು. ಈಗ ನಿರ್ಬಂಧ ತೆರೆವುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X