ರಾಮನಗರದ ಮಾದರಿಯಲ್ಲಿ ಮಧುಗಿರಿ:ಅನಿತಾ
ಮಧುಗಿರಿ, ಡಿ. 30 : ರಾಮನಗರದ ಹಾಗೆ ಮಧುಗಿರಿಯನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮಧುಗಿರಿ ಕ್ಷೇತ್ರದಲ್ಲಿ ನೂತನವಾಗಿ ಶಾಸಕರಾಗಿ ಆಯ್ಕೆಯಾಗಿರುವ ಅನಿತಾ ಕುಮಾರಸ್ವಾಮಿ ಹೇಳಿದರು.
ಫಲಿತಾಂಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿ ಕುರಿತು ಸಮಗ್ರ ಚಿಂತನೆ ನಡೆಸಲಾಗುವುದು ಎಂದರು. ಮಧುಗಿರಿಯಲ್ಲಿ ಶೀಘ್ರದಲ್ಲಿ ಶಾಸಕರ ಕಚೇರಿಯನ್ನು ತೆರೆಯಲಾಗುವುದು. ಜೊತೆಗೆ ಇಲ್ಲಿನ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಅದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಮಹಿಳೆಯರ
ಸಬಲೀಕರಣಕ್ಕೆ
ವಿಶೇಷ
ಯೋಜನೆಗಳನ್ನು
ಜಾರಿಗೆ
ತರುವ
ಇಂಗಿತ
ವ್ಯಕ್ತಪಡಿಸಿದ
ಅವರು,
ಕೆಲವರು
ತಮ್ಮ
ಹೆಸರನ್ನು
ಹಾಳು
ಮಾಡಲು
ಯತ್ನಿಸಿದರು,
ಆದರೆ
ಮಧುಗಿರಿ
ಮತದಾರರು
ತಮ್ಮನ್ನು
ಕೈಬಿಡಲಿಲ್ಲ
ಎಂದು
ಹೇಳಿದರು.
ಪಕ್ಷದ
ವರಿಷ್ಠರು
ಎಂತಹ
ಜವಾಬ್ದಾರಿ
ನೀಡಿದರೂ
ನಿರ್ವಹಿಸಲು
ಸಿದ್ದ
ಎಂದು
ಸಿದ್ಧ
ಎಂದು
ಅನಿತಾ
ಕುಮಾರಸ್ವಾಮಿ
ಹೇಳಿದರು.
ವಲಸೆ,
ನಿರುದ್ಯೋಗಿ
ಸಮಸ್ಯೆಗಳನ್ನು
ಕೊನೆಗಾಣಿಸುವ
ನಿಟ್ಟಿನಲ್ಲಿ
ಕೆಲಸ
ಮಾಡುವುದಾಗಿ
ಹೇಳಿದರು.
(ದಟ್ಸ್
ಕನ್ನಡ
ವಾರ್ತೆ)
ಲೆಕ್ಕಾಚಾರದಂತೆ
ಜಯ
ಲಭಿಸಿದೆ:
ಎಚ್ಡಿಕೆ
ಗೌಡರ
ಮಾನ
ಕಾಪಾಡಿದ
ಸೊಸೆ
ಅನಿತಾ