ನೋಬೆಲ್ ಪ್ರಶಸ್ತಿಗೂ ಹಿಡಿದ ಭ್ರಷ್ಟಾಚಾರದ ಗ್ರಹಣ?

ವಿಜ್ಞಾನ, ಸಾಹಿತ್ಯ, ಅರ್ಥಶಾಸ್ತ್ರ ಯಾವುದೇ ಕ್ಷೇತ್ರವಿರಲಿ ಜಾಗತಿಕ ಪ್ರಶಸ್ತಿಗಳಲ್ಲಿ ಸರ್ವಶ್ರೇಷ್ಠವೆನಿಸಿರುವ ನೋಬೆಲ್ ಪ್ರಶಸ್ತಿಗೆ ಸಂಬಂಧಿಸಿದಂತೆ ಈಮೊದಲು ಪ್ರಶ್ನೆ ಕೇಳಿದ್ದರೆ ಅಸಂಬದ್ಧ ಪ್ರಶ್ನೆ ಎನ್ನಬಹುದಿತ್ತು. ಆದರೆ ಈಗ ಈ ಅಪ್ರಸ್ತುತ ಪ್ರಶ್ನೆಯೇ ಪ್ರಸ್ತುತವೆನಿಸಿದೆ.
ನೋಬೆಲ್ ಪ್ರಶಸ್ತಿ ಯಾರಿಗೆ ನೀಡಬೇಕೆಂದು ನಿರ್ಣಯಿಸುವ ನೋಬೆಲ್ ಪ್ರಶಸ್ತಿ ಸಮಿತಿಯ ಜ್ಯೂರಿಗಳು ಪ್ರಯಾಣ, ಹೊಟೇಲು ಮತ್ತಿತರ ಸವಲತ್ತುಗಳನ್ನು ಪಡೆದು ಚೀನಾ ಪ್ರವಾಸ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ನೋಬೆಲ್ ಪ್ರಶಸ್ತಿ ವಿತರಣೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಸ್ವೀಡನ್ ನ ರೇಡಿಯೋ ವರದಿ ಮಾಡಿರುವ ಹಿನ್ನೆಲೆಯಲ್ಲಿ ಜ್ಯೂರಿಗಳ ವಿರುದ್ಧ ಸ್ವೀಡನ್ನಿ ಭಷ್ಟಾಚಾರ ವಿರೋಧಿ ಸಂಸ್ಥೆ ವಿಚಾರಣೆ ನಡೆಸುತ್ತಿದೆ.
ವೈದ್ಯಕೀಯ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಸಮಿತಿಯ ಮೂರು ಜ್ಯೂರಿಗಳನ್ನು 'ನೋಬೆಲ್ ಪ್ರಶಸ್ತಿ ಗಳಿಸಲು ಏನು ಮಾಡಬೇಕು?' ಎಂಬುದನ್ನು ಚರ್ಚಿಸಲು ಸಲಕ ಸವಲತ್ತುಗಳನ್ನು ನೀಡಿ ಚೀನಾ 2006 ಮತ್ತು 2008ರಲ್ಲಿ ಆಹ್ವಾನಿಸಿತ್ತು. ಚೀನಾ ಅಧಿಕಾರಿಗಳು ಅವರಿಗೆ ಪ್ರವಾಸ, ಹೊಟೇಲು, ಊಟ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಒದಗಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸ್ವೀಡಿಶ್ ಪ್ರಾಸಿಕ್ಯೂಟರ್ ಈ ಘಟನೆಗಳು ನಡೆದಿರುವುದನ್ನು ದೃಢಪಡಿಸಿದ್ದಾರೆ. ಆದರೆ, ಆ ಮೂವರು ಜ್ಯೂರಿಗಳು ಯಾರೆಂಬುದನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದಾರೆ.
2008ರಲ್ಲಿ ಐವರು ಯುರೋಪಿಯನ್ನರು, ನಾಲ್ವರು ಅಮೆರಿಕನ್ನರು ಮತ್ತು ಮೂವರು ಜಪಾನಿಯರು ವಿವಿಧ ಕ್ಷೇತ್ರಗಳಲ್ಲಿ ನೋಬೆಲ್ ಪ್ರಶಸ್ತಿ ಗಳಿಸಿದ್ದಾರೆ. 1957ರಲ್ಲಿ ಇಬ್ಬರು ವಿಜ್ಞಾನಿಗಳು ಪ್ರಶಸ್ತಿ ಪಡೆದಿದ್ದು ಬಿಟ್ಟರೆ ಇಲ್ಲಿಯವರೆಗೆ ಚೀನಾ ದೇಶದವರು ನೋಬೆಲ್ ಪ್ರಶಸ್ತಿ ಪಡೆದಿಲ್ಲ. ನೋಬೆಲ್ ಪ್ರಶಸ್ತಿ ಗಳಿಸುವಲ್ಲಿ ಚೀನಾ ದೇಶದವರಿಗೆ ಸಹಾಯ ಮಾಡಲೆಂದೇ ಜ್ಯೂರಿಗಳು ಚೀನಾ ಪ್ರವಾಸ ಮಾಡಿದ್ದು ಸಾಬೀತಾದರೆ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಸಿಗುವ ಸಾಧ್ಯತೆಯಿದೆ. ಆದರೆ, ಅವರ ವಿರುದ್ಧ ದೋಷಾರೋಪಣೆ ಮಾಡದೆ ಬಿಡುವ ಸಾಧ್ಯತೆಯೇ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ.
(ಏಜೆನ್ಸೀಸ್)
ಪೂರಕ ಓದಿಗೆ
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications