ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೇಶದ ಮೂರು ವಿಮಾನ ನಿಲ್ದಾಣಗಳಿಗೆ ಬಿಗಿ ಭದ್ರತೆ
ನವದೆಹಲಿ, ಡಿ.6:ಭಯೋತ್ಪಾದಕರ ಭೀತಿ ಹಾಗೂ ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ನವದೆಹಲಿ,ಬೆಂಗಳೂರು ಮತ್ತು ಚೆನ್ನೈವಿಮಾನ ನಿಲ್ದಾಣಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಡಿ.3ರಂದು ನಾಗರಿಕ ವಿಮಾನ ಯಾನ ಕಾರ್ಯಾಲಯಕ್ಕೆ ಈ ಬೆದರಿಕೆ ಇ ಮೇಲ್ ಬಂದಿತ್ತು.ಅದರಲ್ಲಿ ಡಿ.6ರಂದು ವಿಮಾನಗಳನ್ನು ಅಪಹರಿಸುವುದಾಗಿ ಬೆದರಿಕೆ ಒಡ್ಡಲಾಗಿತ್ತು.ಹಾಗಾಗಿ ಈ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಭದ್ರತಾ ತಪಾಸಣೆಗಾಗಿ ಮೂರು ಗಂಟೆ ಮುಂಚಿತವಾಗಿಯೇ ವಿಮಾನ ನಿಲ್ದಾಣಕ್ಕೆ ಬರಬೇಕು ಎಂದು ಪ್ರಯಾಣಿಕರಿಗೆ ಸೂಚಿಸಲಾಗಿದೆ. ಕೈಚೀಲಗಳನ್ನು ಕ್ಷ-ಕಿರಣದ ಮೂಲಕ ಪರೀಕ್ಷಿಸಲಾಗುತ್ತಿದೆ.ವಿಮಾನ ನಿಲ್ದಾಣಕ್ಕೆ ಬರುವ ಕಾರುಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಲಾಗುತ್ತಿದೆ. ಸಿಐಎಸ್ ಎಫ್, ಎನ್ ಎಸ್ ಜಿ ಕಮಾಂಡೋಗಳು ಈ ಮೂರು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಕಾರ್ಯದಲ್ಲಿ ನಿಮಗ್ನರಾಗಿದ್ದಾರೆ.
(ಏಜೆನ್ಸೀಸ್)
Comments
Story first published: Saturday, December 6, 2008, 12:31 [IST]