ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಟಿವಿ9 ಒಗ್ಗಟ್ಟು ಪ್ರದರ್ಶನ

By Staff
|
Google Oneindia Kannada News

ಬೆಂಗಳೂರು, ಡಿ. 5 : ಭಯೋತ್ಪಾದನೆ ವಿರುದ್ಧ ಜನಾಭಿಪ್ರಾಯ ಸಂಗ್ರಹಣೆ ಮತ್ತು ಜನಜಾಗೃತಿ ಮೂಡಿಸುವ ಸಲುವಾಗಿ ಟಿವಿ9 ಇಂದು ಸಂಜೆ ಬೆಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾಗರಿಕರ ಅಭಿಪ್ರಾಯಗಳನ್ನು ಆಲಿಸುವುದು ಮತ್ತು ಅದನ್ನು ನೇರ ಪ್ರಸಾರ ಮಾಡುವ ವಿನೂತನ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ.

ಶುಕ್ರವಾರ ( ಡಿ 5) ಸಂಜೆ 6 ಗಂಟೆ ಆರಂಭವಾಗುವ ಈ ಕಾರ್ಯಕ್ರಮ 8 ಗಂಟೆಯವರೆಗೆ ನಡೆಯುತ್ತದೆ. ಸರ್ವರಿಗೂ ಸ್ವಾಗತ ಕೋರಲಾಗಿದೆ ಎಂದು ಟಿವಿ9 ವಾರ್ತಾ ನಿರೂಪಕ ರಂಗನಾಥ್ ಭಾರದ್ವಾಜ್ ಅವರು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.

ಸುಮಾರು 1000 ನಾಗರಿಕರನ್ನು ಆಮಂತ್ರಿಸಿ ಅವರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ರಾಜ್ಯದ ಜನತೆಯ ಮುಂದೆ ಇಡುವುದು ಮತ್ತು ಆ ಮೂಲಕ ಭಯೋತ್ಪಾದನೆಯ ಒಳಹೊರಗುಗಳ ಬಗೆಗೆ ಜನಮಾನಸದ ಸಂಕಲ್ಪವನ್ನು ಗಟ್ಟಿಗೊಳಿವುದು ಈ ಕಾರ್ಯಕ್ರಮದ ಧ್ಯೇಯ ಎಂದು ಭಾರದ್ವಾಜ್ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X