ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇಂದು ಟಿವಿ9 ಒಗ್ಗಟ್ಟು ಪ್ರದರ್ಶನ
ಬೆಂಗಳೂರು, ಡಿ. 5 : ಭಯೋತ್ಪಾದನೆ ವಿರುದ್ಧ ಜನಾಭಿಪ್ರಾಯ ಸಂಗ್ರಹಣೆ ಮತ್ತು ಜನಜಾಗೃತಿ ಮೂಡಿಸುವ ಸಲುವಾಗಿ ಟಿವಿ9 ಇಂದು ಸಂಜೆ ಬೆಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾಗರಿಕರ ಅಭಿಪ್ರಾಯಗಳನ್ನು ಆಲಿಸುವುದು ಮತ್ತು ಅದನ್ನು ನೇರ ಪ್ರಸಾರ ಮಾಡುವ ವಿನೂತನ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ.
ಶುಕ್ರವಾರ ( ಡಿ 5) ಸಂಜೆ 6 ಗಂಟೆ ಆರಂಭವಾಗುವ ಈ ಕಾರ್ಯಕ್ರಮ 8 ಗಂಟೆಯವರೆಗೆ ನಡೆಯುತ್ತದೆ. ಸರ್ವರಿಗೂ ಸ್ವಾಗತ ಕೋರಲಾಗಿದೆ ಎಂದು ಟಿವಿ9 ವಾರ್ತಾ ನಿರೂಪಕ ರಂಗನಾಥ್ ಭಾರದ್ವಾಜ್ ಅವರು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.
ಸುಮಾರು 1000 ನಾಗರಿಕರನ್ನು ಆಮಂತ್ರಿಸಿ ಅವರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ರಾಜ್ಯದ ಜನತೆಯ ಮುಂದೆ ಇಡುವುದು ಮತ್ತು ಆ ಮೂಲಕ ಭಯೋತ್ಪಾದನೆಯ ಒಳಹೊರಗುಗಳ ಬಗೆಗೆ ಜನಮಾನಸದ ಸಂಕಲ್ಪವನ್ನು ಗಟ್ಟಿಗೊಳಿವುದು ಈ ಕಾರ್ಯಕ್ರಮದ ಧ್ಯೇಯ ಎಂದು ಭಾರದ್ವಾಜ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, December 5, 2008, 14:09 [IST]