ಅಕ್ಟೋಬರ್ ಒಳಗೆ ಬಿಬಿಎಂಪಿ ಚುನಾವಣೆ ಅಸಾಧ್ಯ
ಬೆಂಗಳೂರು, ಆ. 21 : ಹೈಕೋರ್ಟ್ ಆದೇಶದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಅಕ್ಟೋಬರ್ 2ರ ಒಳಗೆ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಗೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದೆ.
ಕ್ಷೇತ್ರ ಪುನರ್ ವಿಂಗಡಣೆ ಮತ್ತು ವಾರ್ಡುಗಳ ಮೀಸಲಾತಿ ಪಟ್ಟಿ ತಯಾರು ಮಾಡುವುದು ರಾಜ್ಯ ಸರ್ಕಾರದ ಕೆಲಸ. ಆದರೆ ಇದುವರೆಗೂ ಆಯೋಗದ ಕೈಗೆ ಎರಡು ಪಟ್ಟಿಗಳು ದೊರೆಕಿಲ್ಲ. ಅದು ನಮ್ಮ ಕೈ ಸೇರುವವರೆಗೂ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಆಯೋಗ ತನ್ನ ಅಳಲನ್ನು ತೋಡಿಕೊಂಡಿದೆ. ಕ್ಷೇತ್ರ ಪುನರ್ ವಿಂಗಡಣೆ ಮತ್ತು ವಾರ್ಡುಗಳ ಮೀಸಲಾತಿ ಪಟ್ಟಿ ತಯಾರಿ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಶೀಘ್ರದಲ್ಲಿ ಮುಗಿಸಲು ಸರ್ಕಾರಕ್ಕೆ ಆದೇಶಿಸುವಂತೆ ಆಯೋಗ ನ್ಯಾಯಾಲಯವನ್ನು ಕೋರಿದೆ.
2006ರ ನವೆಂಬರ್ ನಲ್ಲಿ ಪಾಲಿಕೆ ಸದಸ್ಯ.ರ ಆಡಳಿತಾವಧಿ ಮುಗಿದಿದೆ. ಅದೇ ದಿನ ಅಡಳಿತಾಧಿಯನ್ನು ನೇಮಕ ಮಾಡಲಾಗಿದೆ. ಆದರೆ ಇದುವರೆಗೂ ಚುನಾವಣೆ ನಡೆಸಲಾಗಿಲ್ಲ ಎಂದು ಮಾಜಿ ಮೇಯರ್ ಪಿ.ರಮೇಶ್ ಹೈಕೋರ್ಟ್ ಮೊರೆಹೋಗಿದ್ದರು.
(ದಟ್ಸ್ ಕನ್ನಡ ವಾರ್ತೆ)
15
ದಿನದೊಳಗೆ
ಬಿಬಿಎಂಪಿ
ಚುನಾವಣೆಗೆ
ಒತ್ತಾಯ
ಬಿಬಿಎಂಪಿ
ಚುನಾವಣೆಗೆ
ಹೈಕೋರ್ಟ್
ಆದೇಶ