ಬೆಂಗಳೂರು ಸರಣಿ ಸ್ಫೋಟ : ಮಂಗಳೂರಿನಲ್ಲಿ ಕಟ್ಟೆಚ್ಚರ
ಮಂಗಳೂರು, ಜು. 26 : ಶುಕ್ರವಾರ ಜುಲೈ 25ರಂದು ಬೆಂಗಳೂರಿನಲ್ಲಿ ಸಂಭವಿಸಿದ ಸರಣಿ ಸ್ಫೋಟಗಳ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ ಮತ್ತು ಶಂಕಿತರ ಚಲನವಲನಗಳ ಬಗ್ಗೆ ತೀವ್ರ ನಿಗಾ ಇಡಲಾಗಿದೆ.
ನಗರದ ಪ್ರಮುಖ ಮಾಲ್ಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ, ಬಂದರು ಮತ್ತು ವಿಮಾನ ನಿಲ್ದಾಣದಲ್ಲಿಯೂ ಪೊಲೀಸ್ ತುಕುಡಿಗಳನ್ನು ನಿಯೋಜಿಸಲಾಗಿದೆ. ರೈಲು, ಬಸ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಶ್ವಾನದಳವನ್ನು ಕರೆಸಲಾಗಿದ್ದು ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಶಂಕಿತ ಜನರನ್ನು ಕೂಡ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿಯೂ ಬಿಗಿ ಬಂದೋಬಸ್ತನ್ನು ಮಾಡಲಾಗಿದೆ. ಉಡುಪಿಯ ಶ್ರೀಕೃಷ್ಣ ಮಠ ಮತ್ತು ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಗಳಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿದೆ.
(ಯುಎನ್ಐ)
ಪೂರಕ
ಓದಿಗೆ
ಸ್ಫೋಟ
:
ಸುಳಿವು
ನೀಡಿದವರಿಗೆ
ಲಕ್ಷ
ರು.
ಬಹುಮಾನ
ಸಜೀವ
ಬಾಂಬ್
ಇಟ್ಟವನ
ಗುರುತು
ಪತ್ತೆ:
ಬಿದರಿ
ಕೋರಮಂಗಲ
ಫೋರಂ
ಮಾಲ್
ಬಳಿ
ಬಾಂಬ್
ಪತ್ತೆ
ಸರಣಿ
ಸ್ಫೋಟ
:
ಮೂವರು
ಶಂಕಿತ
ಉಗ್ರರು
ವಶಕ್ಕೆ
ಬೆಂಗಳೂರು
ಸರಣಿ
ಸ್ಫೋಟ
ಎಲ್ಲಿ,
ಯಾವಾಗ?
ಬೆಂಗಳೂರಿಗರಿಗೆ
ಇಂದು
ಕರಾಳ
ಶುಕ್ರವಾರ