ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾನ್ಯ ಜನತೆಗೆ ಹೊರೆಯಾಗದಂತೆ ಬಜೆಟ್: ಮುನ್ಷಿ

By Staff
|
Google Oneindia Kannada News

ನವದೆಹಲಿ, ಫೆ.25: ಇಂದಿನಿಂದ(ಫೆ.25) ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ತಮ್ಮ ಪ್ರಥಮ ಭಾಷಣ ಮಾಡಲಿದ್ದಾರೆ. 2008 ಅಧಿಕ ವರ್ಷ. ಆದ ಕಾರಣ ಈ ತಿಂಗಳ ಅಂತ್ಯಕ್ಕೆ ಅಂದರೆ ಫೆ.29ರಂದು ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ.

240 ಶತಕೋಟಿ ರೂ.ಗಳ ಸೇತು ಸಮುದ್ರಂ ಯೋಜನೆ, ಉತ್ತರ ಭಾರತೀಯರ ವಿರುದ್ಧ ರಾಜ್‌ಠಾಕ್ರೆ ಹೇಳಿಕೆಗಳು, ಭಾರತ-ಅಮೆರಿಕಾ ನಡುವಿನ ಅಣು ಒಪ್ಪಂದದಂತಹ ವಿವಾದಾತ್ಮಕ ಅಂಶಗಳು ಪಾರ್ಲಿಮೆಂಟ್‌ನಲ್ಲಿ ಕೋಲಾಹಲ ಎಬ್ಬಿಸಲಿವೆ. ಜೊತೆಗೆ ಬೆಲೆ ಏರಿಕೆ, ರೈತರ ಸಮಸ್ಯೆಗಳು, ಪೆಟ್ರೋಲ್ ಬೆಲೆ ಏರಿಕೆಯನ್ನು ಪ್ರತಿ ಪಕ್ಷಗಳು ಪ್ರಧಾನ ಅಸ್ತ್ರವಾಗಿ ಯುಪಿಎ ಸರ್ಕಾರದ ಮೇಲೆ ಬಳಸಲಿವೆ. ವಿಧಾನಸಭೆ ಚುನಾವಣೆಗಳಲ್ಲಿ ಜಯಭೇರಿ ಬಾರಿಸುತ್ತಿರುವ ಬಿಜೆಪಿ ದೇಶದ ಆಂತರಿಕ ಭದ್ರತೆ ಹಾಗೂ ಹೆಚ್ಚುತ್ತಿರುವ ಉಗ್ರವಾದಿ ದಾಳಿಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದೆ.

ರೈಲ್ವೆ ಬಜೆಟನ್ನು ಮಂಗಳವಾರ (ಫೆ.26)ರಂದು ಮಂಡಿಸಲಾಗುವುದು. ಬಜೆಟ್ ಮಂಡನೆಗೂ ಮುಂಚೆ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪಿ.ಆರ್.ದಾಸ್‌ಮುನ್ಷಿ ಸುದ್ದಿಗಾರರಿಗೆ ನವದೆಹಲಿಯಲ್ಲಿ ತಿಳಿಸಿದ್ದಾರೆ. ಸಾಮಾನ್ಯ ಜನತೆಗೆ ಹೊರೆಯಾಗದಂತೆ ಬಜೆಟನ್ನು ರೂಪಿಸಲಿದ್ದೇವೆ ಎಂದು ಅವರು ಹೇಳಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X