ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ನಡೆದಾಡುವ ಬಾಂಬರ್:ಕಟ್ಟೆಚ್ಚರ

By Staff
|
Google Oneindia Kannada News

Intelligence smells suicide bombers in Bangaloreಬೆಂಗಳೂರು, ಫೆ.25: ನೇಪಾಳದಿಂದ ಇಬ್ಬರು ಆತ್ಮಾಹುತಿ ಬಾಂಬರ್‌ಗಳನ್ನು ಭಾರತಕ್ಕೆ ರವಾನಿಸಲಾಗಿದೆಯೆಂದೂ ಹಾಗೂ ಇವರು ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಓಡಾಡಿಕೊಂಡಿದ್ದಾರೆಂದೂ ಸುಳಿವು ಲಭ್ಯವಾಗಿವೆ. ಈ ಬಗ್ಗೆ ಆಂಧ್ರಪ್ರದೇಶದ ಗುಪ್ತಚರ ಇಲಾಖೆ ಕರ್ನಾಟಕಕ್ಕೆ ಮಾಹಿತಿ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯ ಪೊಲೀಸರು ತೀವ್ರ ಕಟ್ಟೆಚ್ಚರದ ಕ್ರಮಗಳನ್ನು ಕೈಗೊಂಡಿದ್ದಾರೆ. ಆಯಕಟ್ಟಿನ ಜಾಗೆಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯ ಕಾವಲು ಹಾಕಲಾಗಿದೆ.

ಒಬ್ಬ ಆತ್ಮಾಹುತಿ ಬಾಂಬರ್ ಬೆಂಗಳೂರಿನಲ್ಲಿ ಮತ್ತೊಬ್ಬ ಹೈದರಾಬಾದ್‌ನಲ್ಲಿ ನೆಲೆಯೂರಿದ್ದಾನೆಂದು ವರದಿಯಲ್ಲಿ ಹೇಳಲಾಗಿದೆ. ಈ ವರದಿ ಐಟಿ-ಬಿಟಿ ನಗರಗಳಾದ ಬೆಂಗಳೂರು ಮತ್ತು ಹೈದರಾಬಾದ್ ಜನರಲ್ಲಿ ಭಯ ಹುಟ್ಟಿಸಿದೆ. ಮೊದಲೇ ಶಂಕಿತ ಉಗ್ರಗಾಮಿಗಳ ಬಂಧನದಿಂದ ತಲ್ಲಣಗೊಂಡಿರುವ ಕರ್ನಾಟಕ ಈಗ ಆತ್ಮಾಹುತಿ ಬಾಂಬರ್‌ಗಳ ಭೀತಿ ಎದುರಿಸಬೇಕಾಗಿದೆ.

ಐಟಿ-ಬಿಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು, ಹೈದರಾಬಾದ್ ನಗರಗಳಲ್ಲಿ ಆತ್ಮಾಹುತಿ ದಾಳಿ ಮೂಲಕ ವಿಧ್ವಂಸಕ ಕೃತ್ಯ ನಡೆಸಿ ಭಾರತದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹವಣಿಕೆಯಲ್ಲಿವೆ ಭಯೋತ್ಪಾದಕ ಸಂಘಟನೆಗಳು. ಹಾಗಾಗಿ ದಕ್ಷಿಣ ಭಾರತದ ನಗರಗಳ ಮೇಲೆ ಕಣ್ಣಿಡಲಾಗಿದೆ. ಈಗಾಗಲೇ ರಾಜ್ಯ ಪೊಲೀಸರು ನಗರದಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X