ಹರಪನಹಳ್ಳಿಯಲ್ಲಿ ಎರಡು ದಿನಗಳ ಜಿಲ್ಲಾ ಸಾಹಿತ್ಯ ಸಮ್ಮೇಳನ
ದಾವಣಗೆರೆ, ಫೆ. 22 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ, ಭಾನುವಾರ ಫೆ. 23, 24ರಂದು ಹರಪನಹಳ್ಳಿಯಲ್ಲಿ ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನದ ವಿವರ ಕೆಳಗಿನಂತಿದೆ
ಸ್ಥಳ:
ಸರ್ಕಾರಿ
ಪದವಿಪೂರ್ವ
ಕಾಲೇಜಿನ
ಆವರಣ.
ಸಮಯ
:
ಬೆಳಿಗ್ಗೆ
7:30ಕ್ಕೆ
ಧ್ವಜಾರೋಹಣ,
8ಕ್ಕೆ
ಸಮ್ಮೇಳನಾಧ್ಯಕ್ಷರ
ಮೆರವಣಿಗೆ
ಉದ್ಘಾಟನೆ
:
ಮಾಜಿ
ಉಪಮುಖ್ಯಮಂತ್ರಿ
ಎಂ.ಪಿ.
ಪ್ರಕಾಶ್
ಅವರಿಂದ
10.30ಕ್ಕೆ
ಸ್ಮರಣ
ಸಂಚಿಕೆ
ಬಿಡುಗಡೆ:
ಪಿ.ಟಿ.
ಪರಮೇಶ್ವರನಾಯ್ಕ
ಸಮ್ಮೇಳನಾಧ್ಯಕ್ಷರ
ನುಡಿ
:
ಟಿ.ಗಿರಿಜಾ
(ಸಾಹಿತಿ,
ದಾವಣಗೆರೆ)
ಬಿಡುಗಡೆಯಾಗುವ ಪುಸ್ತಕಗಳು : ಹರಪನಹಳ್ಳಿ ತಾ.ಪರಿಚಯ ; ಕುಂ.ಬಾ.ಸದಾಶಿವಪ್ಪ ;ಗೋಣಿಬಸವೇಶ್ವರ ವಚನಗಳು, ಸ್ಥಿತಿ-ಗತಿ (ಕವನ ಸಂಕಲನಗಳು)ಜಿ. ಬಸವಂತಪ್ಪ; ಯಶಸ್ಸು ಶ್ರೀಮಂತಿಕೆಯ ಸರಳ ಸೂತ್ರಗಳು , ಹೆಚ್.ಮಲ್ಲಿಕಾರ್ಜುನ ; ಒಲವು(ಕವನ ಸಂಕಲನ) ವಿ.ಬಿ.ಅಮರನಾಥ ; ಸೇವಾಲಾಲ್ ಮಹಾತ್ಮೆ, ಬಿ.ಹೆಚ್.ಮಲ್ಲಿಕಾರ್ಜುನನಾಯ್ಕ ;ಚಿನ್ನರ ಅಂಗಳದ ಸಿರಿ , ಸುಭದ್ರ ಮಾಡ್ಲಿಗೇರಿ ; ಅನುಭವದ ಅಲೆಗಳು , ಅಂಜಲಿ ಶಿವಪುರ ತಾಂಡ. (ಜಿ.ಬಸವಂತಪಪ್ಪನವರು ಕವಿ ಅಮರನಾಥನವರಿಗೆ ದೊಡ್ಡಪ್ಪರಾಗುತ್ತಾರೆ, ತಂದೆ-ಮಗ ಇಬ್ಬರ ಪುಸ್ತಕಗಳು ಒಂದೇ ದಿನ ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗ್ತಾಯಿರೋದು ಒಂದು ವಿಶೇಷ).
ಮೊದಲ ದಿನ ನಡೆಯುವ ಗೋಷ್ಠಿಗಳು : ಹರಪನಹಳ್ಳಿ ಇತಿಹಾಸ ಮತ್ತು ಸಾಂಸ್ಕೃತಿಕ ಸೊಗಡು, ಕನ್ನಡದ ಉಳಿವು:ಮಾಧ್ಯಮಗಳು , ಚಳವಳಿಗಳು. ಭಾನುವಾರ : ಪ್ರಸ್ತುತ ಸಂಧರ್ಭದಲ್ಲಿ ಮಹಿಳೆ, ದಾವಣಗೆರೆ ಜಿಲ್ಲೆಯ ವೈಶಿಷ್ತ್ಯಗಳು. ಮಧ್ಯಾನ್ಹ ಕವಿಗೋಷ್ಠಿ , ಸಂಜೆ ದತ್ತಿದಾನಿಗಳ ಸನ್ಮಾನ ಮತ್ತು ಬಹಿರಂಗ ಅಧಿವೇಶನ ಸನ್ಮಾನ ಮತ್ತು ಸಮಾರೋಪ ಸಮಾರಂಭ ಹಾಗೂ ಸಂಜೆ 5.30ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು.
(ದಟ್ಸ್ ಕನ್ನಡ ವಾರ್ತೆ)