ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಪನಹಳ್ಳಿಯಲ್ಲಿ ಎರಡು ದಿನಗಳ ಜಿಲ್ಲಾ ಸಾಹಿತ್ಯ ಸಮ್ಮೇಳನ

By Staff
|
Google Oneindia Kannada News

ದಾವಣಗೆರೆ, ಫೆ. 22 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ, ಭಾನುವಾರ ಫೆ. 23, 24ರಂದು ಹರಪನಹಳ್ಳಿಯಲ್ಲಿ ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

ಸಮ್ಮೇಳನದ ವಿವರ ಕೆಳಗಿನಂತಿದೆ

ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣ.
ಸಮಯ : ಬೆಳಿಗ್ಗೆ 7:30ಕ್ಕೆ ಧ್ವಜಾರೋಹಣ, 8ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಉದ್ಘಾಟನೆ : ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರಿಂದ 10.30ಕ್ಕೆ
ಸ್ಮರಣ ಸಂಚಿಕೆ ಬಿಡುಗಡೆ: ಪಿ.ಟಿ. ಪರಮೇಶ್ವರನಾಯ್ಕ
ಸಮ್ಮೇಳನಾಧ್ಯಕ್ಷರ ನುಡಿ : ಟಿ.ಗಿರಿಜಾ (ಸಾಹಿತಿ, ದಾವಣಗೆರೆ)

ಬಿಡುಗಡೆಯಾಗುವ ಪುಸ್ತಕಗಳು : ಹರಪನಹಳ್ಳಿ ತಾ.ಪರಿಚಯ ; ಕುಂ.ಬಾ.ಸದಾಶಿವಪ್ಪ ;ಗೋಣಿಬಸವೇಶ್ವರ ವಚನಗಳು, ಸ್ಥಿತಿ-ಗತಿ (ಕವನ ಸಂಕಲನಗಳು)ಜಿ. ಬಸವಂತಪ್ಪ; ಯಶಸ್ಸು ಶ್ರೀಮಂತಿಕೆಯ ಸರಳ ಸೂತ್ರಗಳು , ಹೆಚ್.ಮಲ್ಲಿಕಾರ್ಜುನ ; ಒಲವು(ಕವನ ಸಂಕಲನ) ವಿ.ಬಿ.ಅಮರನಾಥ ; ಸೇವಾಲಾಲ್ ಮಹಾತ್ಮೆ, ಬಿ.ಹೆಚ್.ಮಲ್ಲಿಕಾರ್ಜುನನಾಯ್ಕ ;ಚಿನ್ನರ ಅಂಗಳದ ಸಿರಿ , ಸುಭದ್ರ ಮಾಡ್ಲಿಗೇರಿ ; ಅನುಭವದ ಅಲೆಗಳು , ಅಂಜಲಿ ಶಿವಪುರ ತಾಂಡ. (ಜಿ.ಬಸವಂತಪಪ್ಪನವರು ಕವಿ ಅಮರನಾಥನವರಿಗೆ ದೊಡ್ಡಪ್ಪರಾಗುತ್ತಾರೆ, ತಂದೆ-ಮಗ ಇಬ್ಬರ ಪುಸ್ತಕಗಳು ಒಂದೇ ದಿನ ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗ್ತಾಯಿರೋದು ಒಂದು ವಿಶೇಷ).

ಮೊದಲ ದಿನ ನಡೆಯುವ ಗೋಷ್ಠಿಗಳು : ಹರಪನಹಳ್ಳಿ ಇತಿಹಾಸ ಮತ್ತು ಸಾಂಸ್ಕೃತಿಕ ಸೊಗಡು, ಕನ್ನಡದ ಉಳಿವು:ಮಾಧ್ಯಮಗಳು , ಚಳವಳಿಗಳು. ಭಾನುವಾರ : ಪ್ರಸ್ತುತ ಸಂಧರ್ಭದಲ್ಲಿ ಮಹಿಳೆ, ದಾವಣಗೆರೆ ಜಿಲ್ಲೆಯ ವೈಶಿಷ್ತ್ಯಗಳು. ಮಧ್ಯಾನ್ಹ ಕವಿಗೋಷ್ಠಿ , ಸಂಜೆ ದತ್ತಿದಾನಿಗಳ ಸನ್ಮಾನ ಮತ್ತು ಬಹಿರಂಗ ಅಧಿವೇಶನ ಸನ್ಮಾನ ಮತ್ತು ಸಮಾರೋಪ ಸಮಾರಂಭ ಹಾಗೂ ಸಂಜೆ 5.30ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X