ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎನ್ಡಿಟಿವಿ ಕಚೇರಿ ಮೇಲೆ ಹಿಂದೂ ಸಾಮ್ರಾಜ್ಯ ಸೇನೆ ದಾಳಿ
ಅಹಮದಾಬಾದ್, ಜ.19: ಹಿಂದು ಸಾಮ್ರಾಜ್ಯ ಸೇನಾ ಕಾರ್ಯಕರ್ತರೆಂದು ಗುರುತಿಸಿಕೊಂಡಿರುವ 15ರಿಂದ 20 ಮಂದಿ ಶನಿವಾರ ಎನ್ಡಿಟಿವಿ ಕಾರ್ಯಾಲಯಕ್ಕೆ ನುಗ್ಗಿ ದಾಂಧಲೆ ಮಾಡಿದ್ದಾರೆ. ವಿವಾದಾತ್ಮಕ ಕಲಾವಿದ ಎಂ.ಎಫ್. ಹುಸೇನ್ಗೆ ಭಾರತ ರತ್ನ ಕೊಡುವ ವಿಚಾರ ಮತಾಭಿಪ್ರಾಯ ಸಂಗ್ರಹಿಸಲು ಎನ್ಡಿ ಟಿವಿ ಮುಂದಾಗಿದ್ದೇ ದಾಳಿಗೆ ಕಾರಣವಾಗಿದೆ.
ಎನ್ಡಿಟಿವಿ ಕಾರ್ಯಾಲಯಕ್ಕೆ ನುಗ್ಗಿದ ಹಿಂದೂ ಸೇನಾ ಕಾರ್ಯಕರ್ತರು ಕಚೇರಿಯಲ್ಲಿನ ಪೀಠೋಪಕರಣಗಳು ಸೇರಿದಂತೆ ಸ್ಟುಡಿಯೋದಲ್ಲಿನ ಬೆಲೆಬಾಳುವ ಸಲಕರಣೆಗಳನ್ನೂ ಧ್ವಂಸಗೊಳಿಸಿದ್ದಾರೆ. ಹವಾನಿಯಂತ್ರಿತ ಹಾಗೂ ವಿದ್ಯುತ್ ಉಪಕರಣಗಳನ್ನೂ ನಾಶ ಮಾಡಿದ್ದಾರೆ. ಇದೇ ವೇಳೆ ಸ್ಟುಡಿಯೋದಲ್ಲಿದ್ದ ಎನ್ಡಿಟಿವಿ ಉದ್ಯೋಗಿಯನ್ನು ಹಾಕಿ ಸ್ಟಿಕ್ಗಳಿಂದ ಮನಬಂದಂತೆ ಥಳಿಸಿದ್ದಾರೆ. ಕಚೇರಿಯ ಒಳಗೆ ಕರಪತ್ರ ಮತ್ತು ಭಿತ್ತಿಪತ್ರಗಳನ್ನು ಅಂಟಿಸಿ ಅಲ್ಲಿಂದ ಜಾಗ ಖಾಲಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
(ಏಜನ್ಸೀಸ್)
Comments
Story first published: Saturday, January 19, 2008, 15:09 [IST]