ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯ ನ್ಯಾಯಾಲಯಕ್ಕೆ ಹೊಸ ನ್ಯಾಯಾಧೀಶರ ನೇಮಕ
ಬೆಂಗಳೂರು, ಜ.05:ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯಕ್ಕೆ ಶಾಶ್ವತ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ.ನ್ಯಾಯಾಧೀಶರಾದ ಜಾವೆದ್ ರಹೀಂ ಹಾಗೂ ಎನ್. ಆನಂದ್ ಅವರು ಶುಕ್ರವಾರ ಶಾಶ್ವತ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಳೆದ ವರ್ಷ ದಿಂದ ನ್ಯಾಯಾಧೀಶ ರಹೀಂ ಹಾಗೂ ಆನಂದ್ ಅವರನ್ನು ಹೆಚ್ಚುವರಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು.ಈ ಇಬ್ಬರಿಗೆ ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಸಿರಿಯಾಕ್ ಜೋಸೆಫ್ ಪ್ರಮಾಣ ವಚನ ಬೋಧಿಸಿದರು.
ರಹೀಂ ಅವರು ರಾಜ್ಯ ಕಾನೂನು ಕಾರ್ಯದರ್ಶಿಯಾಗಿ, ರಾಜ್ಯದ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ನವದೀಪ್ ಕುಮಾರ್ ಸೋಧಿ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಆನಂದ್ ಅವರುಜಿಲ್ಲಾ ನ್ಯಾಯಾಧೀಶರಾಗಿ , ಪ್ರಧಾನ ನೋಂದಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, January 5, 2008, 14:43 [IST]