ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಷೇರುಪೇಟೆಗೂ ಅಂಟಿದೆ ಉಗ್ರರ ನಂಟು : ಚಿದಂಬರಂ
ನವದೆಹಲಿ, ಡಿ.5 : ಷೇರು ಮಾರುಕಟ್ಟೆಯಲ್ಲಿ ಉಗ್ರರು ಹಣ ತೊಡಗಿಸಿರುವುದು ನಿಜ ಎಂದು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ. ಈ ವಿಚಾರವನ್ನು ಹಣಕಾಸು ಸಚಿವ ಚಿದಂಬರಂ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಭಯೋತ್ಪಾದಕ ಸಂಘಟನೆಗಳು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುತ್ತಿವೆ ಎಂದು ರಾಷ್ಟ್ರೀಯ ಭದ್ರತೆ ಸಲಹೆಗಾರ ಎಂ.ಕೆ. ನಾರಾಯಣನ್ ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸರಕಾರ ಎಚ್ಚರವಾಗಿದೆಯೇ ಎಂದು ಬಿಜೆಪಿಯ ರವಿಶಂಕರ್ ಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಿದಂಬರಂ, ಇಂತಹ ಒಂದು ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ವ್ಯಕ್ತಿಯೊಬ್ಬನ ಮೇಲೆ ನಾವು ತೀವ್ರ ನಿಗಾ ಇಟ್ಟಿದ್ದೇವೆ. ಇದಕ್ಕಿಂತಲೂ ಹೆಚ್ಚಿನ ಮಾಹಿತಿ ನೀಡಲಾರೆ ಎಂದರು.
ಗೂಟಕಿತ್ತ ಗೂಳಿ ಓಟದಲ್ಲಿ ಷೇರುಪೇಟೆಯ ಸೂಚ್ಯಂಕ 20 ಸಾವಿರದ ದಾಖಲೆ ಮಟ್ಟಕ್ಕೆ ಏರಿತ್ತು. ಇದಕ್ಕೆ ಕಾರಣ ವಿದೇಶಿ ಹೂಡಿಕೆದಾರರೇ ಎಂದು ತಿಳಿದುಬಂದಿದೆ. ನ.29, 2007ರವರೆಗೆ ಸುಮಾರು 68 ಶತಕೋಟಿ ಡಾಲರ್ ನಮ್ಮ ಷೇರು ಮಾರುಕಟ್ಟೆಗೆ ಹರಿದುಬಂದಿದೆ ಎಂದು ತಿಳಿದುಬಂದಿದೆ.
(ಏಜನ್ಸೀಸ್)
Comments
Story first published: Wednesday, December 5, 2007, 13:22 [IST]