ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು : ಮೊಣಕಾಲು ಶಸ್ತ್ರಚಿಕಿತ್ಸೆಗೆ ಇದೀಗ ಸಕಾಲ

By Staff
|
Google Oneindia Kannada News

ಮಂಗಳೂರು, ನ. 20 : ದಕ್ಷಿಣ ಕನ್ನಡದ ಆಸುಪಾಸು ಪ್ರದೇಶಗಳಲ್ಲಿ ನೆಲೆಸಿದ್ದು ಮೊಣಕಾಲು ನೋವು ಅನುಭವಿಸುತ್ತಿರುವರರಿಗೆ ಸಂಸತದ ಸುದ್ದಿ. ನಗರದ ಎ.ಜೆ. ಪಾಸ್ಪಿಟಲ್ ಮತ್ತು ರಿಸರ್ಚ್ ಕೇಂದ್ರವು ಉಚಿತ ಮೊಣಕಾಲು ಪರೀಕ್ಷೆ ಮತ್ತು ಇಳಿಸಿದ ದರಗಳಲ್ಲಿ ಬದಲಿ ಮೊಣಕಾಲು ಚಿಕಿತ್ಸೆ ಶಿಬಿರ ಹಮ್ಮಿಕೊಂಡಿದೆ.

ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಉಚಿತ ತಪಾಸಣೆ ಮತ್ತು ವೈದ್ಯರ ಸಲಹೆ ಬಯಸುವವರು ಈ ಕ್ಯಾಂಪಿನ ಸದುಪಯೋಗ ಪಡೆಯಬಹುದು. ಮೊಣಕಾಲು ಯಜ್ಞ ಡಿಸೆಂಬರ್ 3ರಿಂದ 8ರವರೆಗೆ ನಡೆಯತ್ತೆ. ಮೊಣಕಾಲಿಕೆ ಸಂಬಂಧಿಸಿದ ಸಾಮಾನ್ಯ ತೊಂದರೆಗಳಾದ ಆರ್ಥ್ರೈಟಿಸ್ ಮತ್ತು ಲಿಗಮೆಂಟ್ ಗಾಯಗಳನ್ನು ಸರಿಪಡಿಸುವ ಉದ್ದೇಶ ನಮ್ಮದು ಎಂದು ಮೂಳೆರೋಗ ತಜ್ಞ ಡಾ. ಸುದರ್ಶನ ಭಂಡಾರಿ ತಿಳಿಸಿದ್ದಾರೆ.

ಬದಲಿ ಮೊಣಕಾಲು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ವಿಧಿಸುವ ಶುಲ್ಕ ಸುಮಾರು 1ಲಕ್ಷ 25 ಸಾವಿರ ರೂ. ಆಗಿರುತ್ತದೆ. ಆದರೆ, ತಮ್ಮ ಆಸ್ಪತ್ರೆಯಲ್ಲಿ ಈ ಶಸ್ತ್ರ ಚಿಕಿತ್ಸೆಗೆ ತಗಲುವ ವೆಚ್ಚ 85ಸಾವಿರ ಮಾತ್ರ ಎಂದು ಭಂಡಾರಿ, ಮಂಗಳೂರಿನಲ್ಲಿ ಸುದ್ದಿಗಾರರಿಗೆ ಹೇಳಿದರು.

ಶಿಬಿರದಲ್ಲಿ ಉಚಿತ ತಪಾಸಣೆಯ ಕಕ್ಷೆಗೆ ಬರುವ ಬಾಬತ್ತುಗಳೆಂದರೆ ವೈದ್ಯರೊಂದಿಗೆ ಸಮಾಲೋಚನೆ, ಎಕ್ಸರೆ ಮತ್ತು ಆರ್ಥೊಸ್ಕೊಪಿ.
ಎಂಆರ್ ಐ, ಮೊಣಕಾಲು ಬದಲಿ ಮತ್ತು ಎಸಿಎಲ್ ಪುನರ್ರಚನೆಗೆ ರೋಗಿಗಳು ರಿಯಾಯಿತಿ ದರದಲ್ಲಿರುವ ವೆಚ್ಚ ಭರಿಸಬೇಕಾಗುತ್ತದೆ. ಆಸಕ್ತಿವುಳ್ಳವರು ಹೆಚ್ಚಿನ ಮಾಹಿತಿಗಾಗಿ ಡಾ. ಪ್ರಶಾಂತ್ ಮಾರ್ಲ[0824-2229601] ಅವರನ್ನು ಸಂಪರ್ಕಿಸಬಹುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X