ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಶಮಿ ಸಂಭ್ರಮ, ಜಂಬೂ ಸವಾರಿಗೆ ವರುಣನ ಕೃಪೆ ಇರಲಿ

By Staff
|
Google Oneindia Kannada News

ಮೈಸೂರು, ಅ 21: ವಿಶ್ವವಿಖ್ಯಾತ ಮೈಸೂರು ದಸರಾ ದ ಜಂಬೂ ಸವಾರಿಯ ವೇಳೆ ಮಳೆ ಬಂದು ಲಕ್ಷಾಂತರ ಮಂದಿ ಗೆ ನಿರಾಶೆ ಮೂಡದಿರಲಿ ಎಂದು ಬೆಂಗಳೂರಿನ ನಾಗರೀಕರ ಅಳಲು.

ಅಷ್ಟೇಕೆ ಎಲ್ಲರೂ ವರುಣದೇವನ ಕೃಪೆಯನ್ನು ಬೇಡುವವರೆ, ಬೆಂಗಳೂರಿನಲ್ಲಿ ನೆನ್ನೆ ಸುರಿದ ಭಾರೀ ಮಳೆ, ಮೈಸೂರಿನಲ್ಲಿ ಇಂದು ಸುರಿಯದಿರಲಿ ಎಂಬುದು ಎಲ್ಲರ ಆಶಯ.

ದಸರಾ ಸಂಭ್ರಮದ ಮೋಡಿಗೆ ತಣ್ಣಿರೆರಚದಂತೆ ವರುಣದೇವನ ಮೊರೆ ಹೊಕ್ಕ ಮೇಲೆ , ಇತರೆ ಭದ್ರತಾ ಕ್ರಮಗಳ ಬಗ್ಗೆ ಗಮನಹರಿಸೋಣ.

ಗಟ್ಟು ನಿಟ್ಟಿನ ಭದ್ರತೆ:

  • ಜಂಬೂ ಸವಾರಿ ಮಾರ್ಗದುದ್ದಕ್ಕೂ 60ಕ್ಕೂ ಸಿಸಿಟಿವಿಗಳನ್ನು ಅಳವಡಿಸಿ, ವಿಶೇಷ ನಿಗಾ ಇರಿಸಲಾಗಿದೆ.
  • ನಗರದ ಸೂಕ್ಷ್ಮ ಪ್ರದೇಶಗಳಲ್ಲಿ 'ವಿಧ್ವಂಸಕ ಕೃತ್ಯ ನಿಗ್ರಹ ಪಡೆ' ಯ 30 ತಂಡಗಳು ಈಗಾಗಲೇ ನಗರ ಗಸ್ತು ತಿರುಗತ್ತಲಿದೆ.
  • ಇದಲ್ಲದೆ 10 ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಸೇವೆಗೆ ಸಿದ್ಧವಾಗಿವೆ.
  • ಅಗ್ನಿ ಶಾಮಕ ದಳ, ತುರ್ತು ಚಿಕಿತ್ಸಾ ವಾಹನಗಳನ್ನು ಸಜ್ಜುಗೊಳಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X