ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಂಟ್ ಶಾಲೆಯಲ್ಲಿ ಸದ್ಯಕ್ಕೆ ಮಾವುತರ ಮಕ್ಕಳಿಗೆ ಅಆಇಈ

By Staff
|
Google Oneindia Kannada News

ಮೈಸೂರು, ಅ.6 : ದಸರಾ ಸಂದರ್ಭದಲ್ಲಿ ಆನೆಗಳದೇ ದರ್ಬಾರು. ಮೈಸೂರು ದಸರಾ ಹಿನ್ನೆಲೆಯಲ್ಲಿ ಆನೆಗಳ ಹಿಂದೆ ಮಾವುತರು ಬರುತ್ತಾರೆ.. ಅವರ ಹಿಂದೆ ಅವರ ಮಕ್ಕಳೂ ಬರುತ್ತಾರೆ. ಈ ಸಮಯದಲ್ಲಿ ಅವರ ಶಾಲೆ ಗತಿ? ವಿದ್ಯಾಭ್ಯಾಸ?

ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ತಲೆಕೆಡಿಸಿಕೊಂಡಿದ್ದು,ಮಾವುತರ ಮಕ್ಕಳಿಗಾಗಿ ಟೆಂಟ್ ಶಾಲೆಗಳನ್ನು ತೆರೆದಿದೆ. ಜಿಲ್ಲಾಧಿಕಾರಿ ಚನ್ನಪ್ಪ ಗೌಡ, ಮೈಸೂರಿನ ಅರಮನೆ ಆವರಣದಲ್ಲಿ ಶಾಲೆಗೆ ಚಾಲನೆ ನೀಡಿದ್ದಾರೆ. ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರಗಳನ್ನೂ ಸಹಾ ವಿತರಿಸಲಾಗಿದೆ.

ಮಾವುತರ ಹನ್ನೆರಡು ಮಂದಿ ಮಕ್ಕಳು, ಮುಂದಿನ 15ದಿನಗಳ ಕಾಲ ಇಲ್ಲಿ ವಿದ್ಯಾಭ್ಯಾಸ ಮಾಡಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಇಬ್ಬರು ಶಿಕ್ಷಕರನ್ನು ನೇಮಕ ಮಾಡಿದೆ. ಜೊತೆಗೆ ನಾಗರಹೊಳೆಯ ಮಾವುತನೊಬ್ಬನ ಪುತ್ರಿ ಶಬನಾ, ಸ್ವಯಂ ಪ್ರೇರಣೆಯಿಂದ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ಮುಂದೆ ಬಂದಿದ್ದಾರೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X