ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕಾರ್ಯತಂತ್ರದೊಂದಿಗೆ ರಂಗಕ್ಕೆ ಕಾಲಿಟ್ಟ ಸೋನಿಯಾ

By Staff
|
Google Oneindia Kannada News

ನವದೆಹಲಿ, ಅ.06 : ಕರ್ನಾಟಕ ರಾಜಕಾರಣಕ್ಕೆ ಸೋನಿಯಾ ಗಾಂಧಿ ಶನಿವಾರ(ಅ.6) ಹೆಜ್ಜೆಯಿಟ್ಟರು. ಬಿಜೆಪಿ ಬೆಂಬಲ ವಾಪಸ್ ತೆಗೆದುಕೊಂಡಿರುವ ಈ ಹೊತ್ತಿನಲ್ಲಿ ಕಾಂಗ್ರೆಸ್ ಏನು ಮಾಡಬೇಕೆಂದು ಸೋನಿಯಾ ಕಾರ್ಯತಂತ್ರ ಯೋಚಿಸುತ್ತಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರವಹಿಸಲು ಸೋನಿಯಾ ಆಸಕ್ತಿ ತೋರಿಸಿದ್ದು, ಪಕ್ಷದ ಹಿರಿಯ ನಾಯಕರಾದ ಎಐಸಿಸಿ ಕಾರ್ಯದರ್ಶಿ ಪೃಥ್ವಿರಾಜ್ ಚವ್ಹಾಣ್ ಅವರ ಜೊತೆ ಸಮಾಲೋಚನೆ ನಡೆಸಿದರು.

ಪಕ್ಷದ ಬಹುತೇಕ ನಾಯಕರು ಜೆಡಿಎಸ್ ಪಕ್ಷವನ್ನು ಮತ್ತೆ ಬೆಂಬಲಿಸಲು ಅಸಮಾಧಾನ ಹೊಂದಿದ್ದಾರೆ. ಈ ಹೊತ್ತಿನಲ್ಲಿ ಭಾನುವಾರ(ಅ.07) ಬೆಂಗಳೂರಿಗೆ ಭೇಟಿ ನೀಡುವ ಚವ್ಹಾಣ್, ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಪಕ್ಷದ ಕೆಲಹಂತದ ಕಾರ್ಯಕರ್ತರ ಮನಸ್ಥಿತಿಯನ್ನು ಅರಿಯಲಿದ್ದಾರೆ. ನಂತರ ಅವರು ನೀಡುವ ಅಭಿಪ್ರಾಯವನ್ನು ಸೋನಿಯಾಗೆ ತಲುಪಿಸಲಿದ್ದಾರೆ.

ಬಿಜೆಪಿ ಅಧಿಕೃತವಾಗಿ ಬೆಂಬಲ ವಾಪಸ್ ಪಡೆಯುವ ತನಕ ಕಾಂಗ್ರೆಸ್ ತಥಸ್ಥ ಧೋರಣೆ ಅನುಸರಿಬೇಕು. ಆತುರದ ಪ್ರತಿಕ್ರಿಯೆ ಸಲ್ಲದು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಬೇರು ಬಿಡುವುದು ಅಷ್ಟು ಸುಲಭವಲ್ಲ ಎಂಬುದು ಬಿಜೆಪಿಗೆ ಈಗ ಅರ್ಥವಾಗಿದೆ ಎಂದು ಮೊಯ್ಲಿ ಹೇಳಿದರು.

ಕಾಂಗ್ರೆಸ್ ವಕ್ತಾರ ಅಭಿಷೇಕೇ ಮನು ಸಿಂಘ್ವಿ ಪ್ರಕಾರ, ಕರ್ನಾಟಕದ ಬೆಳವಣಿಗೆ ದುರದೃಷ್ಟಕರ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X