ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಸೇರಿ ಜೆಡಿಎಸ್ ಶಾಸಕರ ಅನರ್ಹತೆ: ಅ.12ವಿಚಾರಣೆ

By Staff
|
Google Oneindia Kannada News

ಬೆಂಗಳೂರು, ಅ.6 : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ 37 ಜೆಡಿಎಸ್ ಶಾಸಕರನ್ನು ಅನರ್ಹತೆಗೊಳಿಸುವ ಬಗೆಗಿನ ವಿಚಾರಣೆ ಅ.12ರಂದು ನಡೆಯಲಿದೆ. ವಿಧಾನಸಭಾಧ್ಯಕ್ಷ ಕೃಷ್ಣ ವಿಚಾರಣೆಯನ್ನು ಶನಿವಾರ(ಅ.06) ಮುಂದೂಡಿದರು.

2006ರಲ್ಲಿ ಕಾಂಗ್ರೆಸ್ ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದ ಜೆಡಿಎಸ್ ಶಾಸಕರು, ಪಕ್ಷದಿಂದ ದೂರ ಉಳಿದಿದ್ದರು. ಇವರ ವಿರುದ್ಧ ಕ್ರಮ ಕೈಗೊಂಡು, ಸದಸ್ಯತ್ವ ಅನರ್ಹಗೊಳಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ವಿಧಾನಸಭಾಧ್ಯಕ್ಷರಿಗೆ ಆಗ ಪತ್ರ ಬರೆದಿದ್ದರು. ಜೊತೆಗೆ ವಾಟಾಳ್ ನಾಗರಾಜ್, ದೂರು ಸಲ್ಲಿಸಿದ್ದರು. ಕೂಡಲೇ ಅನರ್ಹಗೊಳಿಸಬೇಕೆಂದು ವಿಧಾನಸಭಾಧ್ಯಕ್ಷರ ಒತ್ತಾಯಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ನಡೆದ ವಿಚಾರಣೆ ವೇಳೆ, ದೇವೇಗೌಡರನ್ನು ಈ ಕುರಿತು ವಿವರಣೆ ಕೇಳಬೇಕೆಂದು ಜೆಡಿಎಸ್ ಶಾಸಕರು ಮನವಿ ಸಲ್ಲಿಸಿದರು. ಈ ಮನವಿ ಬಗ್ಗೆ ವಾಟಾಳ್ ಅಸಮಾಧಾನ ಪ್ರದರ್ಶಿಸಿದರು. ಮುಂದಿನ ವಿಚಾರಣೆ ಅ.12ರಂದು ನಡೆಯಲಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X