ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ : ಮಂಗಳೂರು ತಲ್ಲಣ
ಮಂಗಳೂರು, ಜುಲೈ 31 : ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಯಿಂದ ನಗರ ತಲ್ಲಣಗೊಂಡಿದೆ. ಕೊಲೆಗಾರರ ಪತ್ತೆಗೆ ಪೊಲೀಸರು ತನಿಖೆಯನ್ನು ಮಂಗಳವಾರ ಚುರುಕುಗೊಳಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಕೆ.ಸುಬ್ಬರಾವ್(55), ಹತ್ಯೆಗೀಡಾದ ವ್ಯಕ್ತಿ. ಸೋಮವಾರ ರಾತ್ರಿ 9.50ರ ಸುಮಾರಿನಲ್ಲಿ ನಗರದ ಉತ್ಸವ ಹೋಟೆಲ್ ಸಮೀಪ ಕೊಲೆ ನಡೆದಿದೆ. ಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ವಾರಪತ್ರಿಕೆ, ವಿಡಿಯೋ ಪಾರ್ಲರ್, ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ವ್ಯವಹಾರವನ್ನು ಸುಬ್ಬರಾವ್ ನಡೆಸುತ್ತಿದ್ದರು.
ಕಚೇರಿ ಕೆಲಸ ಮುಗಿಸಿ ಕಾರು ಹತ್ತುವ ಸಂದರ್ಭದಲ್ಲಿ ಹತ್ಯೆ ನಡೆದಿದೆ. ಸುಬ್ಬರಾವ್ ಮೇಲೆ ಗುಂಡು ಹಾರಿಸಿದ ವ್ಯಕ್ತಿ, ಸಮೀಪದಲ್ಲಿಯೇ ಇದ್ದ ದ್ವಿಚಕ್ರ ವಾಹನ ಹತ್ತಿ ಪರಾರಿಯಾಗಿದ್ದಾನೆ. 3ಜನರ ಗುಂಪು ಹತ್ಯೆಯಲ್ಲಿ ಭಾಗಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Story first published: Tuesday, July 31, 2007, 5:30 [IST]