ಜಲಸಾಕ್ಷರರ ಸೃಷ್ಟಿಗೆ ಏ.22ರಂದು ವ್ಯಂಗ್ಯಚಿತ್ರ ಪ್ರದರ್ಶನ

Cartoon Exhibition on Waterಬೆಂಗಳೂರು : ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಬಿ.ವಿ.ಪಾಂಡುರಂಗ ರಾವ್‌ ಅವರ ವ್ಯಂಗ್ಯಚಿತ್ರ ಪ್ರದರ್ಶನ, ಏ.22ರಂದು ನಗರದಲ್ಲಿ ನಡೆಯಲಿದೆ. ನಗ್ತಾನಗ್ತಾ , ಚಿಂತನೆ ಮಾಡುತ್ತಾ, ಪರಿಸರ ಪ್ರೇಮ ಬೆಳೆಸಿಕೊಳ್ಳಲು ಇದು ಸುಸಂದರ್ಭ.

ನೀರನ್ನು ಗುರಿಯಾಗಿಟ್ಟುಕೊಂಡು ರೂಪುಗೊಂಡಿರುವ ವ್ಯಂಗ್ಯಚಿತ್ರಪ್ರದರ್ಶನ, ಕಬ್ಬನ್‌ ಪಾರ್ಕ್‌ನ ಬಾಲಭವನದಲ್ಲಿ ನಡೆಯಲಿದೆ. ನಗೆಲೇಪನದೊಂದಿಗೆ ಜಲ ಸಂರಕ್ಷಣೆ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ 50 ವ್ಯಂಗ್ಯಚಿತ್ರಗಳನ್ನು ಪ್ರದರ್ಶನದಲ್ಲಿ , ಸಾರ್ವಜನಿಕರು ವೀಕ್ಷಿಸಬಹುದು.

ಪ್ರಸಕ್ತ ವರ್ಷವನ್ನು ವಿಶ್ವಸಂಸ್ಥೆ ‘ವಿಶ್ವ ಜಲ ವರ್ಷ ’ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜನರನ್ನು ಜಲಸಾಕ್ಷರರನ್ನಾಗಿಸಲು ವ್ಯಂಗ್ಯಚಿತ್ರ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಎಕೋವಾಜ್‌ ಹಮ್ಮಿಕೊಂಡಿದೆ.

ಬಿ.ವಿ.ಪಾಂಡುರಂಗ ರಾವ್‌ ಅವರ ವ್ಯಂಗ್ಯಚಿತ್ರಗಳನ್ನು ಕಾಣಲು ಇಲ್ಲಿ ಕ್ಲಿಕ್ಕಿಸಿ...

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+